ಹಿಂದೂ ಯುವಕನನ್ನು ಅಪಹರಿಸಿ ಮತಾಂತರ ಶಂಕೆ

10:28 PM, Monday, October 25th, 2021
Share
1 Star2 Stars3 Stars4 Stars5 Stars
(No Ratings Yet)
Loading...

Praveen Poojaryಬದಿಯಡ್ಕ: ಪುತ್ತಿಗೆ ಗ್ರಾಮ ಪಂಚಾಯತಿನ ಬಾಡೂರು ಎಂಬಲ್ಲಿ ಹಿಂದೂ ಯುವಕನೊಬ್ಬನನ್ನು ರಾತ್ರಿ ವೇಳೆ ಅಪಹರಿಸಿ ಮತಾಂತರ ಗೊಳಿಸಿರುವ ಬಗ್ಗೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಚಾಕಟೆಚಾಲ್ ರಾಮಣ್ಣ ಪೂಜಾರಿ ಎಂಬವರ ಪುತ್ರ ಪ್ರವೀಣ್ ಕುಮಾರ್ ಸಿ.ಎಚ್ (32) ಎಂಬಾತನನ್ನು ತಂಡವೊಂದು ಶುಕ್ರವಾರ ರಾತ್ರಿ ಬೆದರಿಸಿ ಅಪಹರಿಸಿರುವುದಾಗಿ ದೂರು ನೀಡಲಾಗಿದೆ.

ಯುವಕನನ್ನು ಶೀಘ್ರ ಪತ್ತೆ ಹಚ್ಚಿ ಕ್ರಮಕೈಗೊಳ್ಳದಿದ್ದರೆ ಬಹಿರಂಗ ಹೋರಾಟಕ್ಕಿಳಿಯುವುದಾಗಿ ವಿಶ್ವಹಿಂದು ಪರಿಷತ್,ಬಜರಂಗದಳ,ಮಾತೃಶಕ್ತಿ ದುರ್ಗಾವಾಹಿನಿ ಜಿಲ್ಲಾ ಸಂಘಟನೆ ಎಚ್ಚರಿಸಿದೆ.

ಬಾಡೂರಿನ ಪ್ರವೀಣ್ ಪೂಜಾರಿ ಎಂಬಾತ ನೆಲ್ಲಿಕಟ್ಟೆಯ ಮಾಲೀಕರೋರ್ವರ ಪೆಟ್ರೋಲ್ ಪಂಪ್ ಒಂದರಲ್ಲಿ ಬದಿಯಡ್ಕ ಹಾಗೂ ನೆಲ್ಲಿಕಟ್ಟೆಯಲ್ಲಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಉದ್ಯೋಗದಲ್ಲಿದ್ದು ಮನೆಯಲ್ಲಿ ತಂದೆ ತಾಯಿ ವೃದ್ದಾಪ್ಯದಿಂದಾಗಿ ಆಶಕ್ತರಾಗಿದ್ದಾರೆ. ಇತ್ತೀಚಿನ‌ ದಿನಗಳಿಂದ ಪ್ರವೀಣ್ ಅವರ ನಡವಳಿಕೆಯಲ್ಲಿ ತೀರಾ ಬದಲಾವಣೆ ಕಂಡು ಬಂದಿದ್ದು ಮುಸ್ಲಿಂ ಆರಾಧನೆಗಳ ಬಗ್ಗೆ ಒಲವು ಬೆಳೆಸಿಕೊಂಡಿದ್ದರು ಎನ್ನಲಾಗಿತ್ತು. ಇದನ್ನು ಅರಿತ ಹಿಂದೂ ಸಂಘಟನೆಗಳು ಪ್ರವೀಣ್ ಅವರ ಮನಃ ಪರಿವರ್ತನೆಗೆ ಯತ್ನಿಸಿದ್ದು ಕಳೆದ ಒಂದು ತಿಂಗಳ ಧರ್ಮ ಜಾಗೃತಿಯ ಉಪದೇಶ ನೀಡಲಾಗಿತ್ತು‌ ಈ ನಡುವೆ ಕಳೆದ ಶುಕ್ರವಾರ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಲು ಅಣಿಯಾಗುತ್ತಿದ್ದ ಪ್ರವೀಣ್ ಪೂಜಾರಿಯನ್ನು ತಂಡವೊಂದು ಅಪಹರಿಸಿದೆ ಎಂದು ಹೇಳಲಾಗಿದೆ.

ಶುಕ್ರವಾರದಿಂದ ಮನೆಯಿಂದ ರಾತ್ರೋ ರಾತ್ರಿ ಮನೆಯವರನ್ನು ಬೆದರಿಸಿ ತಂಡ ಕೊಂಡೊಯ್ದ ಪ್ರವೀಣ್ ಪೂಜಾರಿಯನ್ನು ಇದುವರೆಗೂ ಪೊಲೀಸರಿಗೆ ಪತ್ತೆಹಚ್ಚಲಾಗಿಲ್ಲ. ಬಿಳಿ ಕಾರಿನಲ್ಲಿ ಬಂದ ನಾಲ್ವರ ತಂಡ ಅಪಹರಿಸಿರಿದ್ದು ಇದರಲ್ಲಿ ಒಬ್ಬಾತ ಹಳದಿ ಟೀಶರ್ಟ್ ಧರಿಸಿದ್ದು ಮಲೆಯಾಳಂ ಭಾಷೆ ಮಾತನಾಡಿ ಬೆದರಿಸಿದ್ದ ಎಂದು ಯುವಕನ ತಾಯಿ 60 ವರುಷದ ಪ್ರೇಮ ಪೂಜಾರಿ ಇದೀಗ ಮಗನ ನಾಪತ್ತೆಯಿಂದ ದುಃಖಿತರಾಗಿ ಬದಿಯಡ್ಕ ಠಾಣೆಗೆ ದೂರು ನೀಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English