ದಿ. ಸುಧೀರ್ ಪುರಾಣಿಕ್ ಹಾಗೂ ದಿ. ಪ್ರದೀಪ್ ಕೋಟ್ಯಾನ್ ರವರಿಗೆ ಪುಷ್ಪ ನಮನ

5:28 PM, Wednesday, November 17th, 2021
Share
1 Star2 Stars3 Stars4 Stars5 Stars
(No Ratings Yet)
Loading...

Karkala-BJPಕಾರ್ಕಳ   : ಕಾರ್ಕಳದಲ್ಲಿ ಜಾತಿ, ಮತ, ಪಕ್ಷ ಭೇದವಿಲ್ಲದ ಅಜಾತ ಶತ್ರು ಎಂಬ ಖ್ಯಾತಿಯ ಶ್ರೀ ಸುಧೀರ್ ಪುರಾಣಿಕ್ ಹಾಗೂ ಪುರಸಭಾ ಮಾಜಿ ಅಧ್ಯಕ್ಷ, ಎಪಿಎಂಸಿ ಮಾಜಿ ಅಧ್ಯಕ್ಷ, ಬಿಲ್ಲವ ಸಮಾಜದ ಮುಂದಾಳು ಸ್ನೇಹ ಜೀವಿಯಾಗಿ ಭಾರತೀಯ ಜನತಾ ಪಕ್ಷದ ಮುಂದಾಳು ಆಗಿರುವ ಶ್ರೀ ಪ್ರದೀಪ್ ಕೋಟ್ಯಾನ್ ಇವರ ಶ್ರದ್ಧಾಂಜಲಿ ಕಾರ್ಯಕ್ರಮ, ನುಡಿನಮನ ಮತ್ತು ಪುಸ್ಪಾರ್ಚನೆ ಕಾರ್ಕಳ ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ನಡೆಯಿತು.

ಪಕ್ಷದ ಪ್ರಮುಖರಾದ ಬೋಳ ಪ್ರಭಾಕರ ಕಾಮತ್, ಹಿರಿಯರಾದ ರಾಮಚಂದ್ರ ನಾಯಕ್, ಕರ್ನಾಟಕ ರಾಜ್ಯ ಗೇರು ಬೀಜ ನಿಗಮದ ಅಧ್ಯಕ್ಷರಾದ ಮಣಿರಾಜ ಶೆಟ್ಟಿ ಇವರು ಸ್ವರ್ಗಸ್ಥರಿಬ್ಬರ ಬಗ್ಗೆ ಮಾತನಾಡಿದರು. ಮಂಡಲ ಅಧ್ಯಕ್ಷ ಮಹಾವೀರ ಹೆಗ್ಡೆ ಅಧ್ಯಕ್ಷತೆಯಲ್ಲಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್, ಮಂಡಲ ಪ್ರಧಾನ ಕಾರ್ಯದರ್ಶಿ ಜಯರಾಮ್ ಸಾಲ್ಯಾನ್, ನಗರ ಬಿಜೆಪಿ ಅಧ್ಯಕ್ಷ ರವೀಂದ್ರ ಮೊಯಿಲಿ, ಮಂಡಲ ವಕ್ತಾರ ಕೆ.ಎಸ್ ಹರೀಶ್ ಶೆಣೈ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಮಂಡಲ ಕಾರ್ಯದರ್ಶಿ ಅನಂತಕೃಷ್ಣ ಶೆಣೈ, ಪುರಸಭಾ ಉಪಾಧ್ಯಕ್ಷೆ ಪಲ್ಲವಿ, ಅಂತೋನಿ ಡಿಸೋಜ, ಉದಯ ಕೋಟ್ಯಾನ್, ಸುರೇಶ್ ಮಡಿವಾಳ, ಗ್ರಾಮ ಪಂಚಾಯತ್ ಅಧ್ಯಕ್ಷ ಗಿರಿಶ್ ಅಮಿನ್, ಕ್ಯಾಂಪ್ಕೊ ನಿರ್ದೇಶಕ ದಯಾನಂದ ಹೆಗ್ಡೆ, ಎಸ್.ಸಿ ಮೋರ್ಚಾ ಉಸ್ತುವಾರಿ ಶ್ರೀನಿವಾಸ ಕಾರ್ಲ, ಪುರಸಭೆ ಸದಸ್ಯರಾದ ಯೋಗೀಶ್, ಪ್ರಸನ್ನ, ಸಂತೋಷ್ ರಾವ್, ತಾಲೂಕು ಮಹಿಳಾ ಮೋರ್ಚಾ ಕಾರ್ಯದರ್ಶಿ ಕವಿತಾ ಹರೀಶ್ ಆಚಾರ್ಯ, ನಿಟ್ಟೆ ಶಕ್ತಿಕೇಂದ್ರ ಅಧ್ಯಕ್ಷ ಕರುಣಾಕರ ಕೋಟ್ಯಾನ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English