ಧರ್ಮಸ್ಥಳ ವಸತಿ ಛತ್ರದ ನಿವೃತ್ತ ಪ್ರಬಂಧಕ ಸುರೇಂದ್ರ ಬಲ್ಲಾಳ್ ನಿಧನ

9:13 PM, Monday, December 6th, 2021
Share
1 Star2 Stars3 Stars4 Stars5 Stars
(No Ratings Yet)
Loading...

Surendra Ballalಉಜಿರೆ: ಧರ್ಮಸ್ಥಳ ಗ್ರಾಮದ ನಿವಾಸಿ ಸುರೇಂದ್ರ ಬಲ್ಲಾಳ್ (66) ಸೋಮವಾರ ಹೃದಯಾಘಾತದಿಂದ ನಿಧನರಾದರು.

ಅವರು ಕಬಡ್ಡಿ ಆಟಗಾರರಾಗಿದ್ದು ಹಲವಾರು ಪಂದ್ಯಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದರು. ಧರ್ಮಸ್ಥಳದಲ್ಲಿ ದೇವಸ್ಥಾನದ ವಸತಿ ಛತ್ರದಲ್ಲಿ ಪ್ರಬಂಧಕರಾಗಿ ಅವರು ಮೂವತ್ತು ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಅವರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English