ಮಂಗಳೂರು ಪುರಭವನದ ಬಳಿ ಹೊತ್ತಿ ಉರಿದ ಇಂಡಿಕಾ ಕಾರು

9:20 PM, Wednesday, January 12th, 2022
Share
1 Star2 Stars3 Stars4 Stars5 Stars
(No Ratings Yet)
Loading...

Car Fire ಮಂಗಳೂರು : ಕಾರು ಚಾಲಕರೊಬ್ಬರು ಮಂಗಳೂರು ಪುರಭವನದ ಬಳಿ ನಿಲ್ಲಿಸಿದ್ದ ಕಾರು ಧಗಧಗನೆ ಉರಿದು ಕಾರಿನ ಇಂಜಿನ ಸಮೇತ ಮುಂಭಾಗ ಬೆಂಕಿಗೆ ಆಹುತಿಯಾಯಿತು.

ಬುಧವಾರ ಸಂಜೆ ಕೊಣಾಜೆ ದಾಸರ ಮೂಳೆಯ ಕೃಷ್ಣಪ್ಪ ದಾಸ್ ಎಂಬವರು ಕಾರು ನಿಲ್ಲಿಸಿ ಆಸ್ಪತ್ರೆಗೆ ಹೋಗಿದ್ದರು. ಅಷ್ಟರಲ್ಲೇ ಅವರ ಇಂಡಿಕಾ ಐಸಿಎಸ್ ಬೆಂಕಿಗೆ ಆಹುತಿಯಾಗಿದೆ.

ಈ ಸಂದರ್ಭ ಕಾರಿನಲ್ಲಿ ಯಾರು ಇರದೇ ಇದ್ದುದರಿಂದ ಯಾವುದೇ ಅಪಾಯ ಉಂಟಾಗಿಲ್ಲ. ಕಾರಿನ ಇಂಜಿನ್ ಸಂಪೂರ್ಣ ಸುಟ್ಟು ಹೋಗಿದೆ.

ಪಾಂಡೇಶ್ವರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿದರು. ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Car Fire

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English