ಆರ್ಕೆಸ್ಟ್ರಾದಲ್ಲಿ ಚಾನ್ಸ್ ಕೊಡಿಸುವುದಾಗಿ ಮಹಿಳೆಯ ಜೊತೆ ಮಾಜಿ ಗ್ರಾಪಂ ಸದಸ್ಯನ ರಾಸಲೀಲೆ, ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ

7:06 PM, Friday, September 29th, 2023
Share
1 Star2 Stars3 Stars4 Stars5 Stars
(5 rating, 1 votes)
Loading...

ಸುಬ್ರಹ್ಮಣ್ಯ : ವಿವಾಹಿತೆಯ ಜತೆ ಸಲುಗೆ ಬೆಳೆಸಿಕೊಂಡು ಆರ್ಕೆಸ್ಟ್ರಾದಲ್ಲಿ ಚಾನ್ಸ್ ಕೊಡುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಅದರ ಫೋಟೋ ಸೆರೆಹಿಡಿದುಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದಡಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯನನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕು ಅರ್ಲಪದವು ಬಳಿ ನಿವಾಸಿ ಪ್ರಶಾಂತ ಭಟ್ ಮಾಣಿಲ (35) ಬಂಧಿತ ಆರೋಪಿ. ಈತ ಮೂಲತ: ಪುತ್ತೂರಿನ ಅರ್ಲಪದವು ನಿವಾಸಿ. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ದೇವಾಲಯ ಹಿತರಕ್ಷಣಾ ವೇದಿಕೆಯ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 28ರ ಹರೆಯದ ಸಂತ್ರಸ್ತೆ ಮಹಿಳೆ. ಈಕೆಗೆ ಸಂಗೀತ ಬಗ್ಗೆ ಆಸಕ್ತಿ ಇದ್ದು ಕ್ಲಬ್ ಹೌಸ್ ಅಪ್ಲಿಕೇಷನಲ್ಲಿ ಹಾಡುತ್ತಿದ್ದಳು. ಈ ಅಪ್ಲಿಕೇಷನ್‌ ಮೂಲಕ ಪ್ರಶಾಂತ್ ಪರಿಚಯವಾಗಿದ್ದಾನೆ. ಹೀಗೆ ಪರಿಚಯ ಸ್ನೇಹಕ್ಕೆ ತಿರುಗಿ ಕ್ರಮೇಣ ಪರಸ್ಪರ ಇಷ್ಟಪಟ್ಟಿದ್ದರು. ಆಕೆಯ ಹಾಡನ್ನು ಹೊಗಳಿದ ಆತ ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ಕೊಡಿಸುವುದಾಗಿ ಆಮೀಷವೊಡ್ಡಿದ್ದಾನೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ

ಆರ್ಕೆಸ್ಟ್ರಾದಲ್ಲಿ ಹಾಡಬೇಕೆಂಬ ಆಸೆ ಹೊತ್ತಿದ್ದ ಮಹಿಳೆ ಇವನಿಗೆ ಮೊಬೈಲ್ ನಂಬರ್ ನೀಡಿದ್ದಾಳೆ. ಸರಿ ಸುಮಾರು 2 ವರ್ಷ ಕಾಲ ಅವರಿಬ್ಬರು ಫೋನ್‌ನಲ್ಲಿ ಮೆಸೇಜ್ ಹಾಗೂ ಕಾಲ್ ಮಾಡಿಕೊಂಡು ಕಾಲ ಕಳೆದಿದ್ದರು. ಇದೇ ವರ್ಷದ ಜನವರಿ ತಿಂಗಳ ಕೊನೆಯಲ್ಲಿ ಶಿರಸಿ ಮಾರಿಗುಡಿ ದೇವಸ್ಥಾನದಲ್ಲಿ ಭೇಟಿಯಾದ ಅವರಿಬ್ಬರು ಬಳಿಕ ಅಲ್ಲಿಂದ ನೇರ ಹೋಗಿ ಶಿರಸಿಯ ಖಾಸಗಿ ಲಾಡ್ಜ್‌ ನಲ್ಲಿ ರೂಂ ಮಾಡಿ, ಈ ಲಾಡ್ಜ್‌ನಲ್ಲೇ ಆರೋಪಿಯು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಅಲ್ಲದೇ, ಅದೇ ಲಾಡ್ಜಿನಲ್ಲಿ ಫೆಬ್ರುವರಿಯಲ್ಲೂ ಅತ್ಯಾಚಾರ ಎಸಗಿಆರೋಪಿಯು ಬಳಿಕ ಮಹಿಳೆಯೊಂದಿಗಿರುವ ಖಾಸಗಿ ಕ್ಷಣಗಳ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಎನ್ನಲಾಗಿದೆ.

ವೀಡಿಯೋ ಕಾಲ್ ಮಾಡಿ, ಬೆತ್ತಲೆ ದೇಹವನ್ನು ತೋರಿಸುವಂತೆ ಒತ್ತಡ ಹಾಕಿದ ಆತ ತಪ್ಪಿದ್ದಲ್ಲಿ ಲಾಡ್ಜ್‌ ನಲ್ಲಿ ತೆಗೆದ ಫೋಟೊ ತಾಯಿ ಹಾಗೂ ಗಂಡನಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ. ಈ ವೇಳೆ ಅದರ ಸ್ಕ್ರೀನ್ ಶಾಟ್ ಅನ್ನು ಕೂಡಾ ತೆಗೆದು ಬ್ಲಾಕ್ ಮೇಲ್ ಮಾಡಲೆಂದೇ ಇಟ್ಟುಕೊಂಡಿದ್ದ. ಬಳಿಕ ಈ ಎಲ್ಲ ಫೋಟೊಗಳನ್ನು ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದು ಮಹಿಳೆ ಒಂದು ಬಾರಿ 25 ಸಾವಿರ ರೂಪಾಯಿ ಗೂಗಲ್ ಪೇ ಮಾಡಿದ್ದಾಳೆ.

ಆದರೇ ಸ್ವಲ್ಪ ದಿನದ ಬಳಿಕ ಮತ್ತಷ್ಟೂ ಹಣಕ್ಕೆ ಬೇಡಿಕೆ ಇಟ್ಟ ಪ್ರಶಾಂತ್ 7 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹಾಕಿದ್ದಾನೆ. ಹಣ ನೀಡದಿದ್ದಾಗ ಆಕೆಯ ಖಾಸಗಿ ಫೋಟೋಗಳನ್ನು ಹಾಗೂ ತನ್ನ ಜೊತೆ ಇರುವ ಫೋಟೋಗಳನ್ನು ಮಹಿಳೆಯ ತಾಯಿಯ ಮೊಬೈಲಿಗೆ ವಾಟ್ಸಪ್ ಮಾಡಿದ್ದಾನೆ ಕೊನೆಗೆ ಈತನ ಉಪಟಳ ತಾಳಲಾರದೇ ಮಹಿಳೆ ಕಾರವಾರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English