ಮಂಗಳೂರು: ಇತಿಹಾಸ ಪ್ರಸಿದ್ದ ಮಂಗಳೂರು ಮಹಾತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ವಾರ್ಷಿಕ ಜಾತ್ರ ಮಹೋತ್ಸವವು ಆರಂಭವಾಗಿದ್ದು ಗುರುವಾರ ಮಲ್ಲಿಕಾ ಕಲಾವೃಂದ ಕದ್ರಿ ಮಂಗಳೂರು ಆಶ್ರಯದಲ್ಲಿ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು, ಎಲ್ಲರ ಮೆಚ್ಚುಗೆ ಪಡೆಯಿತು.
ಈ ಸಂದರ್ಭದಲ್ಲಿ ಸುಧಾಕರ ರಾವ್ ಪೇಜಾವರ, ಎಂ. ರವೀಂದ್ರ ಶೇಟ್, ರತ್ನಾಕರ ಜೈನ್ , ಮಾಧವ ಎಂ.ಎಸ್, ವಿನಯನಾಂದ , ಎಂ. ಶರತ್ ಶೇಟ್, ಎಂ. ದೀಪ್ತಿ ಶೇಟ್, ಕು. ಶಿವಾನಿ ಶೇಟ್ ಮೊದಲಾದವರು ಉಪಸ್ಥಿತರಿದ್ದರು.
ವಂಸತ್ ನಾಯ್ಕ್, ರಿಮಾ ಜಗನ್ನಾಥ್, ಅಶಿಶ್ ಅಂಚನ್ ರವರನ್ನು ಗೌರವಿಸಲಾಯಿತು.
ಶ್ರೇಯಾ ದಾಸ್ ನಿರೂಪಿಸಿದರು. ಧಾತ್ರಿ , ಶ್ರೇಯಾ ಭಟ್, ಕೃತಿ ಸನಿಲ್ ಸಹಕರಿಸಿದರು.
Click this button or press Ctrl+G to toggle between Kannada and English