ವರ್ಕಾಡಿಯಲ್ಲಿ ‘ಕಾವೀದ ಪುಣ್ಯೋತ್ಸವ’ ತುಳು ಭಕ್ತಿ ಗೀತೆ ಬಿಡುಗಡೆ

1:22 AM, Friday, April 5th, 2024
Share
1 Star2 Stars3 Stars4 Stars5 Stars
(7 rating, 2 votes)
Loading...

ಮಂಜೇಶ್ವರ : ವರ್ಕಾಡಿ ಶ್ರೀ ಕಾವೀ ಸುಬ್ರಹ್ಮಣ್ಯ ದೇವಸ್ಥಾನ ಇದರ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಶಿವಪ್ರಸಾದ್ ತೌಡುಗೋಳಿ ಸಾಹಿತ್ಯ ಬರೆದು ನಿರ್ಮಾಣ ಮಾಡಿದ ‘ಕಾವೀದ ಪುಣ್ಯೋತ್ಸವ’ ತುಳು ಭಕ್ತಿ ಗೀತೆ ಬಿಡುಗಡೆ ಕಾರ್ಯಕ್ರಮ ಏಪ್ರಿಲ್ 3 ರ ಬುಧವಾರ ನಡೆಯಿತು.

ಯತಿ ದ್ವಯರಾದ ಪರಮಪೂಜ್ಯ ಶ್ರೀ ಶ್ರೀ ತೀರ್ಥ ಶ್ರೀಪಾದರು ಶ್ರೀ ಚಿತ್ರಾಪುರ ಮಠ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆಯೂರು ಇವರ ದಿವ್ಯಹಸ್ತದಿಂದ ‘ಕಾವೀದ ಪುಣ್ಯೋತ್ಸವ’ ತುಳು ಭಕ್ತಿ ಗೀತೆ ಬಿಡುಗಡೆ ನಡೆಯಿತು.

ಕಥೆಗಳು ದೇವಸ್ಥಾನದ ಇತಿಹಾಸವನ್ನು ಹೇಳಿದರೆ ಸಾಹಿತ್ಯಗಳು ಅವುಗಳನ್ನು ಜೀವಂತ ಇರಿಸಿವೆ ಎಂದು ಕೊಂಡೆಯೂರು ಶ್ರೀಗಳು ಹೇಳಿದರು.

‘ಕಾವೀದ ಪುಣ್ಯೋತ್ಸವ’ ಹಾಡಿನ ಸಾಹಿತ್ಯ ಶಿವಪ್ರಸಾದ್ ತೌಡುಗೋಳಿ ಇವರದು. ಗಾಯನ ಸಂತೋಷ್ ಪುಚ್ಚೆರ್ , ನಿರ್ಮಾಣ – ಮೇಗಾ ಮೀಡಿಯಾ ಎಂಟರ್ಟೈನ್ ಮೆಂಟ್ಸ್ , ನಿರ್ಮಾಪಕರು – ಸರಿತಾ ಶಿವಪ್ರಸಾದ್ ತೌಡುಗೋಳಿ
ಪ್ರಚಾರ – ಮೇಗಾ ಮೀಡಿಯಾ ನ್ಯೂಸ್ ನಿರ್ವಹಿಸಿದೆ .

ನಾಗರಾಜ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ್ ಬೇರಿಂಜ ಸ್ವಾಗತಿಸಿ, ರವೀಂದ್ರ ಕುಲಾಲ್ ವಂದಿಸಿದರು.

‘ಕಾವೀದ ಪುಣ್ಯೋತ್ಸವ’ ತುಳು ಭಕ್ತಿ ಗೀತೆ ವಿಡಿಯೋ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English