ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡೋದರಲ್ಲಿ ತಪ್ಪುಇದೆಯಾ, ಉಮಾನಾಥ ಕೋಟ್ಯಾನ್ ಪ್ರಶ್ನೆ

9:12 PM, Saturday, April 13th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ನಾರಾಯಣ ಗುರುಗಳಿಗೆ ಮಾಲಾರ್ಪಣೆ ಮಾಡೋದರಲ್ಲಿ ಏನಾದರೂ ತಪ್ಪುಇದೆಯಾ ಬಿಜೆಪಿಗೆ ಮುಸ್ಲಿಂ, ಕ್ರಿಶ್ಚಿಯನ್, ಬಂಟರು, ಬಿಲ್ಲವರು, ಕುಲಾಲರು ಪ್ರತಿಯೊಂದು ಸಮಾಜ ಮತ ಚಲಾಯಿಸುತ್ತಾರೆ. ಬಿಜೆಪಿ ಭಾರತ ದೇಶದ ಪ್ರತಿಯೊಬ್ಬನ ಪಾರ್ಟಿ. ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶ ಕೊಟ್ಟಿದ್ದಾರೆ ಎಂದು ಶಾಸಕ ಹಾಗೂ ಬಿಜೆಪಿ ಮುಖಂಡ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ಅವರು ನಳಿನ್ ಕುಮಾರ್ ಕಟೀಲ್ ಎದುರು ಸ್ಪರ್ಧೆಗಿಳಿದಾಗ ಜಿಲ್ಲೆಯ ಜನ ಜಾತಿ ನೋಡಿಲ್ಲ. ಹಾಗಿರುವಾಗ ಈ ಬಾರಿ ಜಾತಿ ನೋಡುತ್ತಾರ ಎಂದು ಶಾಸಕ ಹಾಗೂ ಬಿಜೆಪಿ ಮುಖಂಡ ಉಮಾನಾಥ ಕೋಟ್ಯಾನ್ ಪ್ರಶ್ನಿಸಿದ್ದಾರೆ.

ಮುಲ್ಕಿಯಲ್ಲಿ ಈ ಹಿಂದೆ ನಡೆದ ಬಿಲ್ಲವ ಸಮಾವೇಶದಲ್ಲಿ ನೀಡಿರುವ ಬಿಲ್ಲವ ಸಮುದಾಯದ ಕುರಿತಾದ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಮುಲ್ಕಿ ಸಮಾವೇಶದಲ್ಲಿ ಸಮುದಾಯದ ಯಾವುದೇ ಅಭ್ಯರ್ಥಿ ಚುನಾವಣೆಗೆ ನಿಂತರೂ ಬೆಂಬಲಿಸಿ ಎಂದು ಕರೆ ಕೊಟ್ಟಿದ್ದ ಉಮಾನಾಥ ಕೋಟ್ಯಾನ್ ಇಂದು ತಮ್ಮ ಹೇಳಿಕೆಗೆ ಯೂಟರ್ನ್ ಹೊಡೆದಿದ್ದಾರೆ.

ಮುಲ್ಕಿಯಲ್ಲಿ ಹೇಳಿಕೆ ಕೊಟ್ಟದ್ದು ಬಿಲ್ಲವ ರಾಷ್ಟ್ರೀಯ ಸಮಾವೇಶದಲ್ಲಿ. ಸಮಾಜದ ಒಬ್ಬ ಪ್ರತಿನಿಧಿಯಾಗಿ ಅಲ್ಲಿ ಮಾತನಾಡಿದ್ದೇನೆ. ಇಲ್ಲಿ ನಾನು ಮಾತನಾಡಬೇಕಿರುವುದು ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ, ಶಿಸ್ತಿನ ಸಿಪಾಯಿಯಾಗಿ, ಆರ್.ಎಸ್.ಎಸ್ ನ ಸ್ವಯಂ ಸೇವಕನಾಗಿ ಮಾತನಾಡುತ್ತಿದ್ದೇನೆ ಎಂದು ಹೇಳಿದರು.

ನಳಿನ್ ಅವರು ಪ್ರಥಮ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದಾಗ ಜಿಲ್ಲೆಯಲ್ಲಿ ಅವರ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ, ಪದಾಧಿಕಾರಿಗಳಿಗೆ ಬಿಟ್ಟು ಮತದಾರನಿಗೆ ಪರಿಚಯ ಇರಲಿಲ್ಲ. ಚುನಾವಣೆ ಸಂದರ್ಭ ಪ್ರಥಮ ಹಿಂದೂ ಸಮಾಜೋತ್ಸವ ಆದಾಗ ʼಇವರು ನಳಿನ್ ಕುಮಾರ್ ಕಟೀಲ್ ನಮ್ಮ ಅಭ್ಯರ್ಥಿʼ ಎಂದು ಹೇಳಿಕೊಂಡು ನಳಿನ್ ಕುಮಾರ್ ಕಟೀಲ್ ಕೈ ಹಿಡಿದು ಒಂದು ಸುತ್ತು ಬಂದಿದ್ದೇನೆ. ಮೂರು ದಶಕಗಳಿಂದ ಈ ಕ್ಷೇತ್ರದ ಜನ ದೇಶಕ್ಕಾಗಿ ಮತ ಚಲಾಯಿಸಿದ್ದಾರೆ. ಈ ಬಾರಿ ಅತೀ ಹೆಚ್ಚು ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English