ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಡ್ಯಾರ್ ದೋಟ ಎಂಬಲ್ಲಿ ಮನೆ ಸಂಪೂರ್ಣ ಜಲಾವೃತ

3:07 PM, Thursday, July 4th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಡ್ಯಾರ್ ದೋಟ ಎಂಬಲ್ಲಿನ ಮನೆ ಸಂಪೂರ್ಣ ಜಲಾವೃತಗೊಂಡಿದೆ.

ವಿಕ್ರಮ್ ಶೆಟ್ಟಿ ಎಂಬುವರಿಗೆ ಸೇರಿದ ಒಂದು ಅಂತಸ್ತಿನ ಮನೆ ಯಾಗಿದ್ದು, ಕಳೆದ ಮೂರು ವರ್ಷಗಳಿಂದ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೋಂಡಾ ಫ್ಯಾಕ್ಟರಿಗೆ ಹೋಗುವ ರಸ್ತೆಯೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮುಳುಗಡೆಯಾಗುತ್ತಿದ್ದು, ರಸ್ತೆಯುದ್ದಕ್ಕೂ ಜಲಾವೃತವಾಗಿದೆ.

ಆ ಪ್ರದೇಶದಲ್ಲಿ ಹಲವಾರು ಮನೆಗಳು ಮತ್ತು ಶಾಲೆಗಳಿದ್ದರೂ ಅವುಗಳಿಗೆ ಹೋಗುವ ರಸ್ತೆಯು ಅಸಮರ್ಪಕ ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದರಿಂದ ಸಂಪೂರ್ಣವಾಗಿ ಜಲಾವೃತವಾಗಿದೆ.

2021ರಲ್ಲಿ ಮಳೆಗಾಲದಲ್ಲಿ ವಿಕ್ರಮ್ ಬಾಡಿಗೆ ಮನೆಯಲ್ಲಿ ಇರುವಂತೆ ಮನವಿ ಮಾಡಲಾಯಿತು. ಸಂಬಂಧಪಟ್ಟ ಅಧಿಕಾರಿಗಳು ಒಳಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದಾಗ ಸ್ವಲ್ಪ ಭರವಸೆ ಇತ್ತು, ಆದರೆ ದುರದೃಷ್ಟವಶಾತ್ ಇಂದಿಗೂ ಕಾಮಗಾರಿ ಪ್ರಾರಂಭವಾಗದ ಪರಿಣಾಮ ಸತತ ಮೂರನೇ ವರ್ಷವೂ ಮನೆ ಮುಳುಗಡೆಯಾಗುತ್ತಿದೆ ಎನ್ನಲಾಗಿದೆ.

ಪ್ರತಿ ವರ್ಷವೂ ಶಾಸಕರು ಮತ್ತು ಜಿಲ್ಲಾಡಳಿತಕ್ಕೆ ಶೀಘ್ರ ಪರಿಹಾರ ನೀಡುವಂತೆ ಮನೆ ಮಾಲೀಕರು ಹಾಗೂ ಇತರೆ ನಿವಾಸಿಗಳು ಒತ್ತಾಯಿಸುತ್ತಿದ್ದರೂ ಮೂರು ವರ್ಷಗಳಿಂದ ಇದೇ ಸಮಸ್ಯೆ ಎಂದು ಹೇಳುತ್ತಿದ್ದಾರೆ.

ವಿಕ್ರಮ್ ತನ್ನ ಕುಟುಂಬ ಮತ್ತು ಚಿಕ್ಕ ಮಗುವಿನೊಂದಿಗೆ ಪ್ರತಿ ಮಳೆಗಾಲದಲ್ಲಿ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಮತ್ತು ಅವರು ಹೆಂಡತಿಯ ನಿವಾಸಕ್ಕೆ ಹೋಗಬೇಕಾದ ಸ್ಥಿತಿ .ವಿಕ್ರಮ್ ನಿವಾಸದ ಜತೆಗೆ ವಿಜಯ್ ಡಿಸೋಜಾ ಅವರ ಮನೆಯೂ ಜಲಾವೃತವಾಗಿದ್ದು, ಎರಡು ವರ್ಷಗಳ ಹಿಂದೆ ಆಯೇಷಾ ಅವರ ಮನೆ ಇಲ್ಲಿ ಕುಸಿದು ಬಿದ್ದಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English