ಪುತ್ತೂರು : ಮನೆಗೆ ನುಗ್ಗಿ ಚೂರಿ ಇರಿದು ಯುವತಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಡೂರು ಗ್ರಾಮದ ಕಂಪದಲ್ಲಿ ಜಯಶ್ರಿ (23) ಎಂಬಾಕೆಯನ್ನು ಚೂರಿಯಿಂದ ಇರಿದು ಬಳಿಕ ಆಕೆ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಳು.
ಬಳಿಕ ಆಕೆ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಳು.
ಬಂಧಿತ ಆರೋಪಿಯನ್ನು ಕನಕಮಜಲು ನಿವಾಸಿ ಉಮೇಶ್ ಎಂದು ಗುರುತಿಸಲಾಗಿದೆ.
ಕೃತ್ಯಕ್ಕೆ ಪ್ರೇಮ ಪ್ರಕರಣವೇ ಕಾರಣ ಎನ್ನಲಾಗಿದೆ. ಸಂಬಂಧಿಕನಾದ ಆರೋಪಿಯೂ ಜಯಶ್ರಿ ಮನೆಗೆ ಬಂದು ಹೋಗುತ್ತಿದ್ದು , ಆತನ ನಡವಳಿಕೆಯಿಂದ ಬೇಸತ್ತು ಜಯಶ್ರೀ ದೂರ ಸರಿದಿದ್ದಳು ಎನ್ನಲಾಗಿದ್ದು , ಇದೇ ಸಿಟ್ಟಿನಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ ಎನ್ನುವುದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಜ.17 ರಂದು ಜಯಶ್ರಿ ಮನೆಯಲ್ಲಿ ಏಕಾಂಗಿಯಾಗಿ ಇದ್ದ ವೇಳೆ, ಏಕಾಏಕಿ ಮನೆ ನುಗ್ಗಿ ಜಯಶ್ರೀಗೆ ಚೂರಿ ಇರಿದಿದ್ದ.
Click this button or press Ctrl+G to toggle between Kannada and English