ಕಾರ್ ಡಿಕ್ಕಿ ಓರ್ವಳ ಸಾವು ಮತ್ತೊಬ್ಬಳ ಸ್ಥಿತಿ ಗಂಭೀರ

1:14 PM, Monday, February 25th, 2013
Share
1 Star2 Stars3 Stars4 Stars5 Stars
(No Ratings Yet)
Loading...

tragic incidentಉಡುಪಿ : ಫೆಬ್ರವರಿ ೨೪  ರವಿವಾರ ದಂದು ತೆಂಕ ಬೋರ್ಡ್‌ ಶಾಲಾ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿ ಬಸ್ಸಿಗಾಗಿ ಕಾಯುತ್ತಿದ್ದ ಸಹೋದರಿಯರೀರ್ವರಿಗೆ ಮುಂಬೈನಿಂದ ಕೇರಳದ ಕುಂಬ್ಳೆಗೆ ತೆರಳುತ್ತಿದ್ದ ಮಾರುತಿ ಆಲ್ಟೋ ಕಾರೊಂದು  ಢಿಕ್ಕಿಯಾದ ಪರಿಣಾಮ ಸಾದಿಯಾ ಸದಫ್ (೧೩) ಎಂಬಾಕೆ ತೀವ್ರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ.

ರವಿವಾರ ಮಧ್ಯಾಹ್ನ ತಂದೆ ಮೌಲಾನ ಮಹಮ್ಮದ್ ಶೌಕತ್ ಆಲಿ, ತಾಯಿ ಸಂಜರಿ ಖಾತೂನ್ ಮತ್ತು ತಂಗಿ ಸೈಮಾ ಪರ್ವಿನ್‌ಳೊಂದಿಗೆ ನತದೃಷ್ಟೆ ಸಾದಿಯಾ ಸದಫ್ ಉಚ್ಚಿಲಕ್ಕೆ ಸಮಾರಂಭವೊಂದಕ್ಕೆ ತೆರಳುವ ಸಲುವಾಗಿ ಬಸ್‌ಗಾಗಿ ಕಾಯುತ್ತಿದ್ದಳು. ಈ ಸಂದರ್ಭ ಉಡುಪಿ ಕಡೆಯಿಂದ ಚಾಲಕ ಮೊಯಿದ್ದೀನ್ ಎಂಬಾತ ಚಲಾಯಿ ಸುತ್ತಿದ್ದ ಮಹಾರಾಷ್ಟ್ರ ನೋಂದಣಿಯ ಆಲ್ಟೋ ಕಾರು ಅತೀ ವೇಗದಿಂದ ನೇರವಾಗಿ ಸೈಮಾ ಪರ್ವಿನ್ ಮತ್ತು ಸಾದಿಯಾ ಸದಫ್ (೧೩) ಗೆ ಡಿಕ್ಕಿ ಹೊಡೆದು ಬಾಲಕಿ ಸದಫ್ ತೀವ್ರವಾಗಿ ಗಾಯಗೊಂಡಿದ್ದಾಳೆ ಕೂಡಲೇ ಆಕೆ ಬದುಕಿರಬಹುದೆಂಬ ಆಶೆಯೊಂದಿಗೆ ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾದರು, ಆಕೆಯನ್ನು ಪರಿಶೀಲಿಸಿದ ವೈದ್ಯರು ಆ ವೇಳೆಗಾಗಲೇ ಸಾದಿಮಾ ಮೃತಪಟ್ಟಿರುವುದನ್ನು ದೃಢೀಕರಿಸಿದರು.

ಈಕೆಯ ಸಹೋದರಿ ಸೈಮಾ ಪರ್ವಿನ್‌ಳನ್ನು ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ಸಂದರ್ಭ ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ ದುರವಸ್ತೆಯೇ ಈ ಅವಘಡಕ್ಕೆ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಮೃತ ಸಾದಿಯಾ ಸದಫ್ ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ಕಲಿಕೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದಳು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English