ಯೆಯ್ಯಾಡಿ : ಬೈಕ್ ಗೆ ಬೊಲೆರೋ ಡಿಕ್ಕಿ, ಚಾಲಕ ಪರಾರಿ

2:52 PM, Tuesday, March 5th, 2013
Share
1 Star2 Stars3 Stars4 Stars5 Stars
(No Ratings Yet)
Loading...

Yeyyadi bike accsidentಮಂಗಳೂರು : ಯೆಯ್ಯಾಡಿ ಸಮೀಪದ ಶರ್ಬತ್ ಕಟ್ಟೆ ಬಳಿ ಬೊಲೆರೋ ವಾಹನ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ವಾಹನ  ಚಾಲಕ ಪರಾರಿಯಾದ ಘಟನೆ ನಿನ್ನೆ  ರಾತ್ರಿ ಸಂಭವಿಸಿದೆ. ಮೃತ ವ್ಯಕ್ತಿ ಸ್ಥಳೀಯ ದಂಡಕೇರಿ ನಿವಾಸಿ ರಿತೇಶ್ (30) ಎನ್ನಲಾಗಿದೆ.

ಅಪಘಾತದಿಂದ ಬೈಕ್ ನುಜ್ಜುಗುಜ್ಜಾಗಿದ್ದು,  ಕದ್ರಿ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ನಾಗಾರಾಜ್ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು. ಪರಾರಿಯಾದ ವಾಹನ ಚಾಲಕನನ್ನು ಹಾಗೂ ವಾಹನವನ್ನು ಕಂಡು ಹಿಡಿಯಲು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಕದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English