ಮಂಗಳೂರು :ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ದೇಶದಲ್ಲಿ ಇಂದು ಮಹಿಳೆಯ ಮಳೆ ನಡೆಯುತ್ತಿರುವ ದೌರ್ಜನ್ಯ ಮತ್ತು ಈ ದೌರ್ಜನ್ಯಗಳ ವಿರುದ್ಧ ದ್ವನಿ ಎತ್ತಬೇಕಾದ ಅಗತ್ಯಗಳ ಬಗ್ಗೆ ಬೀದಿ ನಾಟಕವನ್ನು ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಳು ಪ್ರಸ್ತುತಪಡಿಸಿದರು.
ಬೀದಿ ನಾಟಕದಲ್ಲಿ ಕಾಲೇಜಿನ ಸುಮಾರು ೨೦ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ನಾಟಕವನ್ನು ಪ್ರಮುಖವಾಗಿ ಕೇಂದ್ರ ಮಾರುಕಟ್ಟೆ, ರಥಬೀದಿ, ಸಿಟಿ ಸೆಂಟರ್ ಮಾಲ್ ಹಾಗೂ ಬೆಸೆಂಟ್ ಕಾಲೇಜುಗಳ ಬಳಿ ಆಡಿಸಲಾಯಿತು. ಈ ಬೀದಿ ನಾಟಕದ ಮುಖಾಂತರ ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸ ಮಾಡುವ ಕಡೆಗಳಲ್ಲಿ ನಡೆಯುವ ದೌರ್ಜನ್ಯದ ವಿರುದ್ದ ದನಿಯೆತ್ತುವ ಬಗ್ಗೆ ಜಾಗೃತಿ ಮೂಡಿಸಲಾಯಿತು.
Click this button or press Ctrl+G to toggle between Kannada and English