ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಮೈಸೂರಿನ ಮೂವರು ಆರೋಪಿಗಳ ಬಂಧನ

12:50 PM, Wednesday, March 13th, 2013
Share
1 Star2 Stars3 Stars4 Stars5 Stars
(No Ratings Yet)
Loading...

Ganja seize at Attavar ಮಂಗಳೂರು : ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಮೈಸೂರಿನ ಮೂವರು ಆರೋಪಿಗಳನ್ನು ಕರಾವಳಿ ಕಾವಲು ಪಡೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳು  ಮೈಸೂರಿನಿಂದ ಉಡುಪಿಗೆ ಮಾರಾಟಕ್ಕಾಗಿ ಅಮಲು ಪದಾರ್ಥ ಗಾಂಜವನ್ನು ಸಾಗಿಸುತ್ತಿದ್ದುದಾಗಿ ತಿಳಿದುಬಂದಿದ್ದು,  ಮಂಗಳೂರಿನ ಅತ್ತಾವರ ದ ಉಪ್ಪಿನ ದಕ್ಕೆಯಲ್ಲಿ ಆರೋಪಿಗಳು ಇರುವ ಸುಳಿವು ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂದಿಸಿದ್ದಾರೆ.

ಮೈಸೂರಿನಸೈಯ್ಯದ್‌ ಅನೀಸ್‌ ಅಹ್ಮದ್‌(53), ಮನ್ಸೂರ್‌ ಅಹ್ಮದ್‌(28) ಹಾಗೂ ಚಿಕ್ಕಮಗಳೂರಿನ ಅನ್ವರ್‌ ಪಾಷಾ (45) ಆರೋಪಿಗಳಾಗಿದ್ದು, ಮೂರು ಟ್ರಾವೆಲ್‌ ಬ್ಯಾಗುಗಳಲ್ಲಿ ಸುಮಾರು 8,65,000 ಬೆಲೆಯ ಮೂವತ್ತನಾಲ್ಕು ಕೆ.ಜಿ ಆರುನೂರು ಗ್ರಾಂ ಗಾಂಜಾವನ್ನು, ಮೂರು ಮೊಬೈಲ್‌ ಫೋನುಗಳನ್ನು  ವಶಪಡಿಸಿಕೊಳ್ಳಲಾಗಿದ್ದು ಇದನ್ನು ಮೈಸೂರಿನ ಅನ್ವರ್‌ ಪಾಷಾ ಎಂಬಾತ ಮಾರಾಟಕ್ಕಾಗಿ ನೀಡಿದ್ದಾಗಿ  ಆರೋಪಿಗಳು ತನಿಖೆ ವೇಳೆ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English