ಕಾಸೀಮ್ ಉಳ್ಳಾಲ್ ರವರ ‘ಬೆಸುಗೆ’ ಕನ್ನಡ ಕಾದಂಬರಿ ಬಿಡುಗಡೆ

10:37 AM, Thursday, March 14th, 2013
Share
1 Star2 Stars3 Stars4 Stars5 Stars
(No Ratings Yet)
Loading...

Kaseem ullal's Besuge Novel releasedಮಂಗಳೂರು : ಪ್ರತಿಭಾ ಪ್ರಿಂಟರ್ಸ್ ಬೆಂಗಳೂರು ಇವರ ಮುದ್ರಣದಲ್ಲಿ ಸಾಹಿತಿ ಯು.ಎ ಕಾಸೀಮ್  ಉಳ್ಳಾಲ್ ರಚಿಸಿರುವ ಕನ್ನಡ ಕಾದಂಬರಿ ‘ಬೆಸುಗೆ’ ಬಿಡುಗಡೆ ಸಮಾರಂಭ ಇಂದು ಸಂಜೆ ನಗರದ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ನಡೆಯಿತು.

ಕಾದಂಬರಿ ಬಿಡುಗಡೆಯನ್ನು ಕನ್ನಡ ಬ್ಯಾರಿ ಸಾಹಿತ್ಯ ಅಕಾಡಮಿಯ ನಿಕಟಪೂರ್ವ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಎಂ.ಬಿ.ಅಬ್ದುಲ್ ರಹಿಮಾನ್ ನೆರವೇರಿಸಿದರು.

Kaseem ullal's Besuge Novel releasedಬಳಿಕ ಮಾತನಾಡಿದ ಅವರು ಸಾಹಿತ್ಯ ಎನ್ನುವುದು ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಸಾಹಿತ್ಯ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು .

ಕಾಸೀಮ್  ರವರ ಕಾದಂಬರಿ ಸಮಾಜದ ಬೆಸುಗೆಯಾಗಿ ಎಲ್ಲರೂ ಅನ್ಯೋನ್ಯವಾಗಿ ಬಾಳುವ ಸಂದೇಶ ನೀಡಲಿ ಎಂದು ಅವರು ಹಾರೈಸಿದರು.

Kaseem ullal's Besuge Novel releasedಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಸದಸ್ಯ ಮಹೇಶ್ ಆರ್. ನಾಯಕ್ ಉಪಸ್ಥಿತರಿದ್ದರು.

ಸಮಾರಂಭದ ಅದ್ಯಕ್ಷತೆಯನ್ನು ಸಲೀಮ್ ಬಾವಾ ಮಾಲಕರು ಬರಕಾ ಒವರ್ಸೀಸ್  ಇವರು ವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಬಿ.ಎ. ಮಹಮ್ಮದ್ ಆಲಿ ನಿರ್ವಹಿಸಿದರು, ನ್ಯಾಯವಾದಿ ಮಹಮ್ಮದ್ ಹನೀಫ್ ಸ್ವಾಗತಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English