ಲಂಚ ಪಡೆದ ಅಧಿಕಾರಿ ಬಂಧನ

5:11 PM, Wednesday, February 5th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Arrested-briberyಉಡುಪಿ: ಸಬ್ಸಿಡಿ ಹಣ ಬಿಡುಗಡೆ ಮಾಡಲು ಸಣ್ಣ ಕೈಗಾರಿಕಾ ಉದ್ಯಮಿಯೊಬ್ಬರಿಂದ ₨ 10 ಸಾವಿರ ಲಂಚ ಪಡೆದ ಆರೋಪದ ಮೇಲೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಪಿ.ನಾಗೇಶ್‌ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಶ್ರೀಕಾಂತ್‌ ಎಂಬುವವರು ಸುಮಾರು ₨ 22 ಲಕ್ಷ ಬಂಡವಾಳದ ಕರಕುಶಲ ಕೈಗಾರಿಕೆ ಆರಂಭಿಸಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಬಂಡವಾಳದ ಒಟ್ಟು ಮೊತ್ತಕ್ಕೆ ಅನುಗುಣವಾಗಿ, ಅವರಿಗೆ ₨ 8.75 ಲಕ್ಷ ಸಹಾಯಧನ ಇಲಾಖೆಯಿಂದ ಸಂದಾಯವಾಗಬೇಕಿತ್ತು. ಆದರೆ, ಸಹಾಯಧನ ಬಿಡುಗಡೆ ಮಾಡಬೇಕಾದರೆ,  ಲಂಚ ನೀಡಬೇಕೆಂದು ನಾಗೇಶ್‌ ಸತಾಯಿಸುತ್ತಿದ್ದರು.

ಈ ಬಗ್ಗೆ ನಾಗೇಶ್‌ ಲೋಕಾಯುಕ್ತ ಪೊಲಿಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು, ನಾಗೇಶ್‌ ಬಂಧನಕ್ಕೆ ತಂತ್ರ ರೂಪಿಸಿದ್ದರು. ನಾಗೇಶ್‌ ಮಂಗಳವಾರ ಸಂಜೆ ಕಚೇರಿಯಲ್ಲಿ ಶ್ರೀಕಾಂತ್‌ ಅವರಿಂದ ಲಂಚದ ಹಣ ಪಡೆದಾಗ ಅವರನ್ನು ಲೋಕಾಯುಕ್ತ ಡಿವೈಎಸ್‌ಪಿ ಉಮೇಶ್‌ ಶೇಟ್‌ ಮತ್ತು ಇನ್‌ಸ್ಪೆಕ್ಟರ್‌ ಮೋಹನ್‌ ಕೊಟ್ಟಾರಿ ನೇತೃತ್ವದ ತಂಡ ಬಂಧಿಸಿತು.

ಸಿಬ್ಬಂದಿ ಸಂತೋಷ್‌, ದಿವಾಕರ ಶರ್ಮ, ರಘುರಾಂ, ಅಶೋಕ್‌, ದಿನೇಶ್‌, ಶ್ರೀಧರ್‌, ರಿಯಾಜ್‌, ನಾಗೇಶ್‌ ಉಡುಪ, ಶಿವರಾಮ್‌ ಮತ್ತು ಸತ್ಯವತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English