ಮಗನಿಗೆ ಕತ್ತಿಯಿಂದ ಇರಿದು ತಾನೂ ಆತ್ಮಹತ್ಯೆ..!

4:53 PM, Wednesday, September 12th, 2018
Share
1 Star2 Stars3 Stars4 Stars5 Stars
(No Ratings Yet)
Loading...

sucideಮಂಗಳೂರು: ಮಾನಸಿಕ ಖಿನ್ನತೆಗೊಳಗಾದ ವ್ಯಕ್ತಿ ತನ್ನ ಮಗನಿಗೆ ಕತ್ತಿಯಿಂದ ಇರಿದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡದ ಕಡಬದ ಆಲಂಕಾರಿನಲ್ಲಿ ನಡೆದಿದೆ.

ಆಲಂಕಾರು ಗ್ರಾಮದ ಪಟ್ಟೆಮಜಲು ನಿವಾಸಿ ರಾಜೀವ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡವರು. ಶೀನಪ್ಪ ಪೂಜಾರಿ ತನ್ನ ಪುತ್ರ ರತನ್ಗೆ ಕತ್ತಿಯಿಂದ ಇರಿದು, ಬಳಿಕ ಕತ್ತಿಯಿಂದ ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶೀನಪ್ಪ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ತನ್ನ ಕುತ್ತಿಗೆ ಹಾಗೂ ಮರ್ಮಾಂಗಕ್ಕೆ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾಯಾಳು ರತನ್ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English