ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು “ಎ” ಗ್ರೇಡ್ ಅಧಿಕಾರಿಗಳ ವಸತಿ ಗೃಹವನ್ನು ಬುಧವಾರ ಉರ್ವ ಸ್ಟೋರಿನಲ್ಲಿ ವಸತಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಗಳೂರು ದಸರಾಗೆ ದೇಶ ವಿದೇಶಗಳಿಂದ ಜನರು ಬರುತ್ತಾರೆ.
ದಸರಾ ಬರುತ್ತಿರುವುದರಿಂದ ಹಬ್ಬ ಆರಂಭವಾಗುವ ಮುಂಚೆ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಿ ಎಂದು ಅಧಿಕಾರಿಗಳಿಗೆ ಸಚಿವ ಯು.ಟಿ.ಖಾದರ್ ಸೂಚಿಸಿದ್ದಾರೆ.
ಏರ್ಪೋರ್ಟ್ನಲ್ಲಿ ಇಳಿದ ಕೂಡಲೇ ಅವರಿಗೆ ಗುಂಡಿ ಇರುವ ರಸ್ತೆಗಳು ಕಾಣಸಿಗುತ್ತದೆ. ಇದರಿಂದ ಮಂಗಳೂರಿನ ಹೆಸರು ಹಾಳಾಗಬಾರದು. ಕೂಡಲೇ ಗುಂಡಿ ಇರುವ ರಸ್ತೆಗಳನ್ನು ಮುಚ್ಚುವಂತೆ ಸೂಚಿಸಿದರು.
Click this button or press Ctrl+G to toggle between Kannada and English