ದ.ಕ ಜಿಲ್ಲಾ ಬಿಜೆಪಿ ವತಿಯಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ.

8:31 PM, Wednesday, October 20th, 2010
Share
1 Star2 Stars3 Stars4 Stars5 Stars
(No Ratings Yet)
Loading...

ದ.ಕ ಜಿಲ್ಲಾ ಬಿಜೆಪಿ ವತಿಯಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ.ಮಂಗಳೂರು: ರಾಜ್ಯದ ರಾಜಕಾರಣದಲ್ಲಿ ಕುತಂತ್ರ ನೀತಿಯಿಂದ ಆಡಳಿತ ಸರಕಾರಕ್ಕೆ ತೊಂದರೆಕೊಡುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ದ.ಕ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಛೇರಿಯ ಎದುರು ಇಂದು ಸಂಜೆ ಪ್ರತಿಭಟನೆ ನಡೆಯಿತು.

ದ.ಕ ಜಿಲ್ಲಾ ಬಿಜೆಪಿ ವತಿಯಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ.
ಸ್ಪಷ್ಟ ಜನಾದೇಶದಿಂದ ಅಧಿಕಾರಕ್ಕೆ ಬಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವ ಬಿಜೆಪಿ ಸರಕರಾದ ಕಾರ್ಯವೈಖರಿಯನ್ನು ಕಂಡು ಸಹಿಸದ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಮಾಡುವ ಕುತಂತ್ರಗಳು ಇನ್ನು ನಡೆಯುವುದಿಲ್ಲ ರಾಜ್ಯದಲ್ಲಿ ಇನ್ನು ಐದು ವರ್ಷಗಳವರೆಗೆ ಸರಕಾರ ಅಧಿಕಾರದಲ್ಲಿರುತ್ತದೆ. ಎಂದು ಮಂಗಳೂರು ಶಾಸಕ ಎನ್. ಯೋಗೀಶ್ ಭಟ್ ಹೇಳಿದರು.

ದ.ಕ ಜಿಲ್ಲಾ ಬಿಜೆಪಿ ವತಿಯಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ.
ನಮ್ಮ ಶಾಸಕರು ಪಕ್ಷ ನಿಷ್ಠರು ಎಂದು ಹೇಳುತ್ತಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಇಂದು ತಮ್ಮ ಪಕ್ಷದ ಶಾಸಕರು ರಾಜಿನಾಮೆ ನೀಡುವುದನ್ನು ಕಂಡು ಚಡಪಡಿಸುತ್ತಿದ್ದಾರೆ. ಭಾರತೀಯ ಜನತಾಪಕ್ಷದ 19 ಜನ ಶಾಸಕರಿಗೆ ವಿವಿಧ ಅಮಿಷಗಳನ್ನು ತೋರಿಸಿ ಆಡಳಿತವನ್ನು ಬುಡಮೇಲು ಮಾಡಲು ಹೋಗಿ ತಮ್ಮವರನ್ನೇ ಕಳೆದು ಕೊಳ್ಳುತ್ತಿದ್ದಾರೆಂದು ದ.ಕ ಜಿಲ್ಲಾ ಬಿಜೆಪಿ ಸಮಿತಿಯ ಜಿಲ್ಲಾಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಸಂಜೀವ ಮಠಂದೂರು, ನಿತಿನ್ ಕುಮಾರ್, ಪುಷ್ಪಲತಾ, ಕಿಶೋರ್ ಪುತ್ತೂರು, ಮಹಿಳಾಮೋರ್ಚಾದ ಸುಲೋಚನಾ ಭಟ್, ಕೆ.ಪಿ ಜಗದೀಶ ಅಧಿಕಾರಿ, ಭುನಾಭಿರಾಮ ಉಡುಪ, ನಗರಾಧ್ಯಕ್ಷ ಶ್ರೀಕರ ಪ್ರಭು, ವಿಶ್ವೇಶರ ಭಟ್, ಉಪಮೇಯರ್ ರಾಜೇಂದ್ರ ಕುಮಾರ್, ಬಾಲಕೃಷ್ಣ ಭಟ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ದ.ಕ ಜಿಲ್ಲಾ ಬಿಜೆಪಿ ವತಿಯಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English