ಕುಲಶೇಖರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಬಸ್

12:30 PM, Monday, April 1st, 2013
Share
1 Star2 Stars3 Stars4 Stars5 Stars
(No Ratings Yet)
Loading...

Bus overturns at Kulashekarಮಂಗಳೂರು : ಮಂಗಳಾದೇವಿಯಿಂದ ಶಕ್ತಿನಗರಕ್ಕೆ ತೆರಳುತ್ತಿದ್ದ ಬಸ್ಸೊಂದು ಕುಲಶೇಖರ ಕಲ್ಪನೆ ಸಮೀಪ  ಚಾಲಕನ ನಿಯಂತ್ರಣ ತಪ್ಪಿ ಉರು ಳಿ ಬಿದ್ದ ಘಟನೆ ಶನಿವಾರ ನಡೆದಿದೆ.

ಶನಿವಾರ ಸಂಜೆ 7 ಗಂಟೆ ಸುಮಾರಿಗೆ 6-ಡಿ ನಂಬರ್‌ನ ಅಂಬಿಕಾ ಬಸ್ ಕಲ್ಪನೆ ಸಮೀಪ ತೆರಳುತ್ತಿದ್ದಂತೆ ಅದರ ಚಾಲಕ ರಸ್ತೆ ಯಾ ತೀರಾ ಎಡ ಬಲಕ್ಕೆ ಬಸ್ ಚಲಾಯಿಸಿದ ಸಂದರ್ಭ ರಸ್ತೆ ಚರಂಡಿ ದಾಟಿ ಸ್ವಲ್ಪ ಎತ್ತರದ ಜಾಗಕ್ಕೆ ಬಸ್ ಚಲಿಸಿತು ಇದರಿಂದಾಗಿ ಬಸ್  ಚಾಲಕನ ನಿಯಂತ್ರಣ ಕಳೆದುಕೊಂಡಿತು. ತಕ್ಷಣ ಬಸ್‌ನ್ನು ಹಿಂದಕ್ಕೆ ತರಲು ಚಾಲಕ ಯತ್ನಿಸಿದ್ದರೂ ಅಲ್ಲಿದ್ದ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿಯಾಗಿ ರಸ್ತೆಗೆ ಅಡ್ಡವಾಗಿ ಮಗುಚಿ ಬಿತ್ತು.

ಗಂಬೀರವಾಗಿ ಗಾಯಗೊಂಡ ಚಾಲಕನನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾದರು, ಗಂಭೀರ ಗಾಯಗೊಂಡಿದ್ದ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಳಿದಂತೆ ಕೆಲ ಮಹಿಳೆಯರು ಗಂಭೀರ ಗಾಯಗೊಂಡ್ಡಿದ್ದು ಆಸಪತ್ರೆ ಗೆ ದಾಖಲಿಸಲಾಗಿದೆ.

ರಸ್ತೆ ಅಪಘಾತದಿಂದಾಗಿ  ಮಂಗಳೂರು ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ವ್ಯತ್ಯಯವಾಗಿತ್ತು. ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಕುಲಶೇಖರ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯವಸ್ಥೆ ಯಲ್ಲಿ ವ್ಯತ್ಯೆಯ ಉಂಟಾಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English