ಬಟ್ಟೆ ಅಂಗಡಿ ನೌಕರ ಸಾಬಿತ್ ಕೊಲೆ ಪ್ರಕರಣ ಐವರು ಆರೋಪಿಗಳ ಸೆರೆ

11:25 PM, Sunday, July 14th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

Sabith Murderಕಾಸರಗೋಡು:  ಬೆನಜ್ಹೀರ್ ಬಟ್ಟೆ ಮಳಿಗೆಯ ನೌಕರ ಮೀಪುಗುರಿಯ ಟಿ.ಎ. ಸಾಬಿತ್ ನನ್ನು ಜುಲೈ 7 ರಂದು ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಸಹಿತ ಐವರನ್ನು ಸರ್ಕಲ್ ಇನ್ಸ್ ಪೆಕ್ಟರ್ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

ಪ್ರಮುಖ ಆರೋಪಿಗಳಾದ ಅಣಂಗೂರು ಜೆ.ಪಿ. ಕಾಲನಿಯ ಕೆ. ಅಕ್ಷಯ್(21), ಕಾಳ್ಯಂಗಾಡಿನ ಕೆ.ಎನ್. ವೈಶಾಖ್(19) ಹಾಗೂ ಜೆ.ಪಿ. ಕಾಲನಿಯ ಆರ್. ಬಿಜೇಶ್(20), ಕೆ. ಸಚಿನ್ ಕುಮಾರ್(19) ಮತ್ತು 17ರ ಹರೆಯದ ಜುವೆನೈಲ್ ಬಂಧನಕ್ಕೊಳಗಾಗಿದ್ದಾರೆ.

ಅಕ್ಷಯ್ ಮತ್ತು ವೈಶಾಖ್ ಕೃತ್ಯದಲ್ಲಿ ನೇರವಾಗಿ ಶಾಮೀಲಾದ ಆರೋಪಿಗಳಾಗಿದ್ದು, ಉಳಿದ ಮೂವರು ಆರೋಪಿಗಳಿಗೆ ನೆರವಾದವರು. ಕೃತ್ಯಕ್ಕೆ ಬಳಸಿದ ಎರಡು ಚಾಕುಗಳನ್ನು ನೆಲ್ಕಳದ ತೋಡು ಬಳಿಯಿಂದ ಶುಕ್ರವಾರ ಬೆಳಗ್ಗೆ ಪತ್ತೆ ಹಚ್ಚಲಾಗಿದೆ.

ಸಾಬಿತ್ ಮತ್ತು ಸ್ನೇಹಿತ ಪಾರೆಕಟ್ಟೆ ಪಳ್ಳಂ ಹೌಸಿನ ಅಹಮ್ಮದ್ ರೈಸ್(20) ಬೈಕ್ ನಲ್ಲಿ ಜೆ.ಪಿ. ಕಾಲನಿ ರಸ್ತೆ ಮೂಲಕ ಸಂಚರಿಸುತ್ತಿದ್ದಾಗ ಅಕ್ಷಯ್ ಮತ್ತು ವೈಶಾಖ್ ಹಿಂದಿನಿಂದ ಸ್ಕೂಟರ್ ನಲ್ಲಿ ಬರುತ್ತಿದ್ದರು. ಹಾರ್ನ್ ಹಾಕಿದರೂ ಸೈಡ್ ನೀಡಲಿಲ್ಲ. ಈ ಕಾರಣಕ್ಕಾಗಿ ಮರಳಿ ಬರುವುದನ್ನು ಕಾದು ಕುಳಿತು ದಾಳಿ ಮಾಡಿ ಸಾಬಿತ್ ನನ್ನು ಕೊಲೆ ಮಾಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English