ಪತ್ನಿಗೆ ಡಾಕ್ಟರ್ ಕಲಿಯಲು ನೆರವು ಲಭಿಸಿಲ್ಲ- ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

12:40 AM, Wednesday, February 3rd, 2016
Share
1 Star2 Stars3 Stars4 Stars5 Stars
(4 rating, 5 votes)
Loading...
jagadisha

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತೆ ಶ್ರುತಿಯ ಪತಿ ಆದೂರು ಕುಂಟಾರಿನ ನಾರಾಯಣ ಅವರ ಪುತ್ರ ಜಗದೀಶ್(24) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ. ಗಂಭೀರ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಬೆಂಗಳೂರಿನಲ್ಲಿ ಹೋಮಿಯೋ ಡಾಕ್ಟರ್ ವಿಭಾಗದಲ್ಲಿ ಕಲಿಯುತ್ತಿರುವ ಶ್ರುತಿಯ ಕಾಲೇಜು ಫೀಸ್ ಪಾವತಿಸಲು ಸಾಧ್ಯವಾಗದೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಸಂಬಂಧಿಕರು ತಿಳಿಸಿದ್ದಾರೆ.

ಶ್ರುತಿಯ ಕಲಿಕೆಗೆ ಎಲ್ಲಾ ನೆರವು ನೀಡುವುದಾಗಿ ಈ ಹಿಂದೆ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ ಈ ವರೆಗೂ ಚಿಕ್ಕಾಸು ಲಭಿಸಿಲ್ಲ. ಎರಡೂವರೆ ಲಕ್ಷ ರೂ. ಫೆ.೨೮ ರೊಳಗೆ ಪಾವತಿಸಬೇಕೆಂದು ಕಾಲೇಜಿನಿಂದ ಮಾಹಿತಿ ಬಂದಿದೆ. ಹಣ ಹೊಂದಿಸಲು ಪ್ರಯತ್ನ ಮಾಡಿದ್ದರೂ ಸಾಧ್ಯವಾಗಲಿಲ್ಲ.ಈ ನೋವಲ್ಲಿ ವಿಷ ಸೇವಿಸಿದ್ದಾಗಿ ಸಂಬಂಧಿಕರು ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English