ಕೊಲೆಯತ್ನ : ಆರು ಮಂದಿ ಆರೋಪಿಗಳ ಬಂಧನ

12:31 AM, Tuesday, February 9th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
6accused

ಮಂಗಳೂರು: ಮಸೀದಿಯೊಂದರ ವಿಷಯಕ್ಕೆ ಸಂಬಂದಿಸಿ ಯುವಕನೋರ್ವನ ಕೊಲೆಗೆ ಯತ್ನಿಸಿದ ಆರು ಮಂದಿ ಆರೋಪಿಗಳ ತಂಡವೊಂದನ್ನು ನಗರದ ಪೊಲೀಸರು ಬಂಧಿಸಿದ್ದಾರೆ.

ಕಾಪ್ರಿಗುಡ್ಡೆ ನಿವಾಸಿ ಸಿ.ಅಬ್ದುಲ್ ಹಮೀದ್ (20), ಅತ್ತಾವರ ನಿವಾಸಿ ಎಂ.ಇಸ್ಮಾಯಿಲ್ ರಿಹಾನ್ (20), ಬೋಳಾರ ನಿವಾಸಿ ಉನೀಝ್ ಅಹಮ್ಮದ್ (20), ಅತ್ತಾವರ ನಿವಾಸಿ ಶಾಬಾನ್ ಮಿಷಾಬ್ (23), ಕುದ್ರೋಳಿ ನಿವಾಸಿ ನೌಫಲ್ (20) ಮತ್ತು ಕಾಸರಗೋಡಿನ ನಿವಾಸಿ ಸೊಹೈಲ್ ಎಂ.ಪಿ. ಬಂದಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಹಲ್ಲೆಗೊಳಗಾದ ಮೊಹಮ್ಮದ್ ಫೈಝಿಲ್ ಮತ್ತು ಆತನ ತಂದೆ ಹಾಗೂ ಆರೋಪಿ ಸುಹೈಲ್‍ನ ನಡುವೆ ಕಾಞಂಗಾಡ್‍ನ ಜಮಾತ್ ಮಸೀದಿಗೆ ಸಂಬಂಧಿಸಿ ವೈಯಕ್ತಿಕ ವಿಚಾರದಲ್ಲಿ ವೈಷಮ್ಯವಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿತ್ತು. ಫೆ. 5ರಂದು ಫೈಝಲ್ ಆತನ ಸ್ನೇಹಿತರೊಂದಿಗೆ ನಗರದ ಪಿವಿಆರ್ ಸಿನಿಮಾಕ್ಕೆ ಬಂದಿದ್ದು ಸಿನಿಮಾ ನೋಡಿ ವಾಪಸ್ಸು ಕಂಕನಾಡಿಯತ್ತ ತೆರಳುತ್ತಿದ್ದ ವೇಳೆ ಮಾಲ್‍ನ ಗೇಟ್ ಸಮೀಪ ಯುವಕರಿದ್ದ ಕಾರು ಮತ್ತು ಬೈಕ್‌ ಈತನ ಕಾರಿನ ಅಡ್ಡಗಟ್ಟಲು ಪ್ರಯತ್ನಿಸಿತು.

ಅಪಾಯದ ಮುನ್ಸೂಚನೆ ಅರಿತ ಫೈಝಲ್ ತನ್ನ ಕಾರನ್ನು ವೇಗವಾಗಿ ಚಲಾಯಿಸಿ ಅಲ್ಲಿಂದ ಪರಾರಿಯಾದರೂ ಸಹ ಆರೋಪಿಗಳು ಹಿಂಬಾಲಿಸಿಕೊಂಡು ಬಂದು ಕ್ಲಾಕ್ ಟವರ್‌ ಸಮೀಪ ಫೈಝಲ್‍ನ ಕಾರಿಗೆ ಅಡ್ಡಗಟ್ಟಿ ಸುಹೈಲ್ ಮತ್ತು ಆತನ ಸ್ನೇಹಿತರು ಪೈಝಲ್‍ನನ್ನು ಕಾರಿಂದ ಹೊರಗೆಳೆದು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು. ಇವರಿಂದ ತಪ್ಪಸಿಕೊಂಡ ಫೈಝಲ್, ಈ ಬಗ್ಗೆ ನಗರದ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದ. ತಕ್ಷಣ ಕಾರ್ಯಗತರಾದ ಪೊಲೀಸರು ಸುಹೈಲ್ ಸೇರಿ ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English