ಪೆರ್ಲ: ಡಿವೈಎಫ್ಐ ವತಿಯಿಂದ ಕಾಸರಗೋಡಿನಲ್ಲಿ ಆ.15 ನಡೆಯುವ ಯುವ ಸಾಗರ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಕುಂಬಳೆ ಬ್ಲಾಕ್ ಮಟ್ಟದ ಕಾಲ್ನಡೆ ಜಾಥಾವನ್ನು ಪೆರ್ಲದಿಂದ ಪ್ರಾರಂಭಿಸಲಾಯಿತು.
ಡಿವೈಎಫ್ಐ ಎಣ್ಮಕಜೆ ವಿಲೇಜ್ ಕಾರ್ಯದರ್ಶಿ ಮಣಿಕಂಠನ್ ಅಧ್ಯಕ್ಷತೆಯಲ್ಲಿ ಕಾಸರಗೋಡು ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಶಿವ್ಜಿ ವೆಳ್ಳಿಕೋತ್ ಜಾಥಾ ನಾಯಕ ಕೆ.ಸಬೀರ್ ಅವರಿಗೆ ಪತಾಕೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಡಿವೈಎಫ್ಐ ಬ್ಲಾಕ್ ಕಾರ್ಯದರ್ಶಿ ನಾಸಿರುದ್ದೀನ್, ಸಿ.ಎ.ಸುಬೈರ್, ವಿಠಲ ರೈ, ಅವಿನಾಶ್ ಸಿ.ಎಚ್, ಮಂಜುನಾಥ ಪಿ.ಕೆ, ಸಚಿತಾ ರೈ, ವಿನೋದ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English