ಸೀತಾಂಗೋಳಿಯಲ್ಲಿ ಬೈಕ್ ಗೆ ಟಿಪ್ಪರ್ ಲಾರಿ ಢಿಕ್ಕಿ: ಅಧ್ಯಾಪಕ ದಾರುಣ ಮೃತ್ಯು

11:17 AM, Wednesday, September 7th, 2016
Share
1 Star2 Stars3 Stars4 Stars5 Stars
(No Ratings Yet)
Loading...

Ubeidಕುಂಬಳೆ: ಸೀತಾಂಗೋಳಿ ಬಳಿ ಮುಖಾರಿಕಂಡ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಶಾಲಾ ಅಧ್ಯಾಪಕರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಬೈಕ್‌ಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಕುಂಟಾರು ಬಳಿಯ ಉಯಿತ್ತಡ್ಕ ನಿವಾಸಿಯೂ ಕಟ್ಟತ್ತಡ್ಕ ಮುಹಿಮ್ಮಾತ್ ಹೈಯರ್ ಸೆಕೆಂಡರಿ ಶಾಲೆಯ ಮಲೆಯಾಳ ಅಧ್ಯಾಪಕನಾದ ಉಬೈದ್ ಕೆ.(30) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಮಂಗಳವಾರ ಬೆಳಿಗ್ಗೆ ಇವರು ಮನೆಯಿಂದ ಶಾಲೆಗೆ ಬೈಕ್‌ನಲ್ಲಿ ಆಗಮಿಸುತ್ತಿದ್ದಾಗ ಮುಖಾರಿಕಂಡದಲ್ಲಿ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ. ಅಪಘಾತದಿಂದ ತಲೆಗೆ ಗಂಭೀರ ಗಾಯಗೊಂಡ ಉಬೈದ್ ಸ್ಥಳದಲ್ಲೇ ಮೃತಪಟ್ಟರು.

Ubeidವಿಷಯ ಅರಿತು ಸ್ಥಳಕ್ಕೆ ತಲುಪಿದ ಕುಂಬಳೆ ಎಸ್.ಐ ಮೆಲ್ವಿನ್ ಜೋಸ್ ನೇತೃತ್ವದ ಪೊಲೀಸರು ಹಾಗೂ ನಾಗರಿಕರು ಸೇರಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿ,ಮಹಜರು ನಡೆಸಿದರು. ಮೊಹಮ್ಮದ್ ಮುಸ್ಲಿಯಾರ್-ಆಮಿನ ದಂಪತಿಯ ಪುತ್ರನಾದ ಉಬೈದ್ ಪತ್ನಿ ಫಸೀಲ, ಸಹೋದರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English