ಗೋವಿನ ಮಹತ್ವವನ್ನು ಮನೆಮನೆಗೆ ತಲುಪಿಸಿ ಜನಜಾಗೃತಿ ಮೂಡಿಸುವುದರಿಂದ ಗೋರಕ್ಷಣೆ ಸಾಧ್ಯ: ಸಿದ್ಧಾರ್ಥ ಗೋಯೆಂಕಾ

12:19 PM, Monday, September 26th, 2016
Share
1 Star2 Stars3 Stars4 Stars5 Stars
(No Ratings Yet)
Loading...

siddartha-goyenkaಉಡುಪಿ: ಗೋವಿನೊಂದಿಗಿರುವ ಭಾವನಾತ್ಮಕ ಸಂಬಂಧದ ಜೊತೆಗೆ ಗೋವಿನಿಂದ ಸಿಗುವ ವಾಣಿಜ್ಯ ಉಪಯೋಗ ಹಾಗೂ ಔಷಧಿಯುಕ್ತ ವಸ್ತುಗಳ ಮಹತ್ವವನ್ನು ಮನೆಮನೆಗೆ ತಲುಪಿಸಿ ಜನಜಾಗೃತಿ ಮೂಡಿಸುವುದರಿಂದ ಗೋರಕ್ಷಣೆ ಸಾಧ್ಯ ಎಂದು ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದ ರಾಜ್ಯ ಸಂಚಾಲಕ ಸಿದ್ಧಾರ್ಥ ಗೋಯೆಂಕಾ ಹೇಳಿದರು.

ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜರುಗಿದ ಗೋಸಂರಕ್ಷಣಾ ಪ್ರಕೋಷ್ಠದ ಸಭೆ ಉದ್ದೇಶಿಸಿ ಮಾತನಾಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರು ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ನಿಯಂತ್ರಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್‌ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ ಶೆಟ್ಟಿ, ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಸುಂದರ್‌ರಾಜ್‌, ನೀಲಾವರ ಗೋ ಶಾಲೆಯ ಪ್ರಮುಖ್‌ ರಾಘವೇಂದ್ರ ಆಚಾರ್ಯ, ತಾಲೂಕು ಪಂಚಾಯತ್‌ ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ನಾಯಕರಾದ ಸಂಧ್ಯಾ ರಮೇಶ, ಸುರೇಶ ಶೆಟ್ಟಿ ಗುರ್ಮೆ, ಪ್ರಭಾಕರ ಪೂಜಾರಿ, ಜಗದೀಶ ಆಚಾರ್ಯ, ರಜನಿ ಹೆಬ್ಟಾರ್‌, ಸತೀಶ್‌ ಶೆಟ್ಟಿ ಮುಟ್ಲುಪಾಡಿ, ರಾಘವೇಂದ್ರ ಉಪ್ಪೂರು, ಶ್ರೀನಿವಾಸ ಶರ್ಮ ಮೊದಲಾದವರು ಉಪಸ್ಥಿತರಿದ್ದರು.

ಶ್ಯಾಮಲಾ ಎಸ್‌. ಕುಂದರ್‌ ಸ್ವಾಗತಿಸಿ, ಜಿಲ್ಲಾ ಗೋಸಂರಕ್ಷಣಾ ಸಂಚಾಲಕ ರಾಧಾಕೃಷ್ಣ ಮೆಂಡನ್‌ ಮಲ್ಪೆವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English