ಬೆಳ್ತಂಗಡಿ: ನಾಪತ್ತೆಯಾದ ಯೋಧ ಏಕನಾಥ ಶೆಟ್ಟಿ ಅವರ ಸಮವಸ್ತ್ರ ಅ. 23ರಂದು ಊರಿಗೆ ಬರಲಿದೆ. ಚೆನ್ನೈಯ ತಾಂಬರಂ ವಾಯುನೆಲೆಯಿಂದ ಅಂಡಮಾನ್ ನಿಕೋಬಾರ್ಗೆ ಹೊರಟ ಸೇನಾ ವಿಮಾನದಲ್ಲಿದ್ದ 29 ಮಂದಿ ಪೈಕಿ ಯೋಧ ಏಕನಾಥ ಶೆಟ್ಟಿ ಅವರು ಕೂಡ ನಾಪತ್ತೆಯಾಗಿದ್ದರು.
ಹುಡುಕಾಟದಲ್ಲಿ ಯಾವುದೇ ಸುಳಿವು ದೊರೆತಿರಲಿಲ್ಲ. ಪರಿಹಾರ ನೀಡುವ ಸಲುವಾಗಿ ಈ ಪ್ರಕರಣದಲ್ಲಿ ಅಷ್ಟೂ ಮಂದಿಯನ್ನು ಸತ್ತಂತೆಯೇ ಎಂದು ಪರಿಗಣಿಸಿ ಆದೇಶ ನೀಡಲಾಗಿತ್ತು.
ಏಕನಾಥ ಶೆಟ್ಟಿ ಅವರ ಸಮವಸ್ತ್ರದೊಂದಿಗೆ ಮಿಲಿಟರಿಯವರು ರೈಲಿನಲ್ಲಿ ರವಿವಾರ ಬೆಳಗ್ಗೆ 10.30ಕ್ಕೆ ಮಂಗಳೂರು ತಲುಪಲಿದ್ದಾರೆ. ಬಳಿಕ ಗುರುವಾಯನಕೆರೆಗೆ ತಂದು ಮನೆಯವರಿಗೆ ಹಸ್ತಾಂತರಿಸುವರು. ಯೋಧನ ಶರೀರಕ್ಕೆ ನೀಡಿದಷ್ಟೇ ಗೌರವವನ್ನು ಸಮವಸ್ತ್ರಕ್ಕೆ ನೀಡಲಾಗುತ್ತದೆ.
Click this button or press Ctrl+G to toggle between Kannada and English