ವನದುರ್ಗ ಜಲಂತರ್ಗತ ನಾಗ ಸಾನಿಧ್ಯಕ್ಕೆ ನಟ ಕಿಚ್ಚ ಸುದೀಪ್, ರವಿಶಂಕರ್ ಭೇಟಿ

4:24 PM, Saturday, November 5th, 2016
Share
1 Star2 Stars3 Stars4 Stars5 Stars
(4 rating, 1 votes)
Loading...

Sudeepಮಂಗಳೂರು: ಬಂಟ್ವಾಳ ತಾಲೂಕಿನ ಮೊಡಂಕಾಪುವಿನಲ್ಲಿರುವ ಶ್ರೀ ವನದುರ್ಗ ಜಲಂತರ್ಗತ ನಾಗ ಸಾನಿಧ್ಯ ಇತ್ತೀಚೆಗೆ ಸ್ಯಾಂಡಲ್‌ವುಡ್ ನಟರ ಭೇಟಿಯಿಂದ ಸುದ್ದಿಯಾಗುತ್ತಿದೆ.

ಇದೀಗ ಅಭಿನಯ ಚಕ್ರವರ್ತಿ, ಬಿಗ್‌ಬಾಸ್ ನಿರೂಪಕ ಕಿಚ್ಚ ಸುದೀಪ್, ಜನಪ್ರಿಯ ಖಳನಟ ರವಿಶಂಕರ್, ರವೀಶ್ ಅವರ ಸರದಿ. ಇಂದು ಮೊಡಂಕಾಪುವಿನಲ್ಲಿ ನಾಗದೇವರ ದರ್ಶನ ಪಡೆದ ನಟರು, ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಾಲಯದ ಮುಖ್ಯಸ್ಥ ಗುರುದತ್ ಶೆಣೈ, ಪಾಂಡುರಂಗ ಶೆಣೈ, ಭೂಮಿಕ ಶೆಣೈ, ರಾಜೇಶ್ ಭಟ್ ಮತ್ತು ಪುಷ್ಪರಾಜ್ ಅವರು ನಟರನ್ನು ಸ್ವಾಗತಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English