ಮಂಗಳೂರು: ಪಶ್ಚಿಮ ವಲಯದ ಪೊಲೀಸ್ ಮಹಾನಿರ್ದೇಶಕರಾಗಿ ಪಿ. ಹರಿಶೇಖರನ್ ಇಂದು ಅಧಿಕಾರ ವಹಿಸಿಕೊಂಡರು.
ಪಶ್ಚಿಮ ವಲಯ ಐಜಿಪಿಯಾಗಿದ್ದ ಜೆ.ಅರುಣ್ ಚಕ್ರವರ್ತಿ ಅವರಿಂದ ಹರಿಶೇಖರನ್ ಅಧಿಕಾರ ವಹಿಸಿಕೊಂಡರು.
ಈ ವೇಳೆ ಮಾತನಾಡಿದ ಅವರು, ಈ ಹಿಂದೆ ವೀರಪ್ಪನ್ ಕಾರ್ಯಾಚರಣೆ, ನಕ್ಸಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದೇನೆ. ಆದ್ದರಿಂದ ಸವಾಲುಗಳು ತನಗೆ ಹೊಸತಲ್ಲ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ತನ್ನ ಉದ್ದೇಶ. ತನ್ನಿಂದ ಉತ್ತಮ ಸೇವೆಯನ್ನು ಜನ ಪಡೆದುಕೊಳ್ಳುವಂತೆ ಈ ಹುದ್ದೆಯ ಸದುಪಯೋಗವಾಗಬೇಕೆಂದರು.
ಕರಾವಳಿಗಿರುವ ಭಯೋತ್ಪಾದನೆ ಸಂಪರ್ಕ ಕುರಿತು ಅಧ್ಯಯನ ಮಾಡಿ, ಕರಾವಳಿ ಕಾವಲು ಪಡೆಯನ್ನು ಬಲಗೊಳಿಸಬೇಕಾಗಿದೆ ಎಂದರು.
1996ರ ಐಪಿಎಸ್ ಶ್ರೇಣಿಯ ಹರಿಶೇಖರನ್ ತಮಿಳುನಾಡು ಮೂಲದವರು. ರಾಯಚೂರು, ತುಮಕೂರು, ಬೆಂಗಳೂರು ಕರ್ತವ್ಯ ಸಲ್ಲಿಸಿದ್ದಾರೆ. ಹರಿಶೇಖರನ್ ಕ್ರೀಡಾಪಟುವಾಗಿ ಉತ್ತಮ ಓಟಗಾರ. ಜೆ.ಅರುಣ್ ಚಕ್ರವರ್ತಿ ಅವರನ್ನು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
Click this button or press Ctrl+G to toggle between Kannada and English