ಗೋಭಕ್ಷಣೆ ಮಾಡುವವರು ಹಿಂದುಗಳಲ್ಲ : ಮೋಹನ್ ಭಟ್

8:38 PM, Friday, June 30th, 2017
Share
1 Star2 Stars3 Stars4 Stars5 Stars
(No Ratings Yet)
Loading...

Mohan Bhatಉಡುಪಿ :  ಗೋಭಕ್ಷಣೆ ಮಾಡುವವರು ಹಿಂದುಗಳಲ್ಲ,  ಹಿಂದೂಗಳು ಗೋಭಕ್ಷಣೆ ಮಾಡುತ್ತಾರೆ ಎಂಬ ಪೇಜಾವರ ಸ್ವಾಮೀಜಿಯ ಹೇಳಿಕೆಯನ್ನು ನಾವು ಒಪ್ಪುದಿಲ್ಲ ಎಂದು ಶ್ರೀರಾಮಸೇನೆ ಮಂಗಳೂರು ವಿಭಾಗದ ಕಾರ್ಯದರ್ಶಿ ಮೋಹನ್ ಭಟ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದ ಆವರಣದಲ್ಲಿ ನಮಾಝ್ ಮಾಡಲು ಅವಕಾಶ ನೀಡಿರುವುದನ್ನು ವಿರೋಧಿಸಿ ಜು.2ರಂದು ಉಡುಪಿ ಕ್ಲಾಕ್ ಟವರ್‌ಎದುರು ಶ್ರೀಕೃಷ್ಣ ದೇವರಿಗೆ ಪ್ರಾರ್ಥಿಸಿ ಭಜನೆ ಮಾಡುವ ಮೂಲಕ ಪ್ರತಿಭಟನೆ ಮಾಡಲಿದ್ದೇವೆ ಎಂದು ಹೇಳಿದರು.

ಮುಸ್ಲಿಮರು ಮಠದ ಆವರಣದಲ್ಲಿ ನಮಾಝ್ ಮಾಡುವ ಮೂಲಕ ಅಶುದ್ಧಿಯಾಗಿರುವ ಶ್ರೀಕೃಷ್ಣ ಮಠದ ಆವರಣವನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡಬೇಕು. ಮುಂದೆ ಇಂತಹ ಘಟನೆ ಮಠ ಮಂದಿರಗಳಲ್ಲಿ ನಡೆಯದಂತೆ ಹಾಗೂ ಪೇಜಾವರ ಶ್ರೀಗೆ ಶ್ರೀಕೃಷ್ಣ ಮುಖ್ಯಪ್ರಾಣ ದೇವರು ಪ್ರೇರಣೆ ನೀಡಲಿ ಎಂದು ಪ್ರಾರ್ಥಿಸಲಾಗುವುದು, ಇದಕ್ಕೆ ಸ್ಪಂದಿಸದಿದ್ದರೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ವಿಜಯ ಕುಮಾರ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ದಿನೇಶ್ ನಾಯ್ಕಿ, ಶ್ರೀರಾಮಸೇನೆಯ ಜಿಲ್ಲಾ ವಕ್ತಾರ ಜಯರಾಮ್ ಅಂಬೆಕಲ್ಲು, ಜಿಲ್ಲಾಧ್ಯಕ್ಷ ದಿನೇಶ್ ಪಾಂಗಾಳ ಉಪಸ್ಥಿತರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English