ಹಿಂದೂಗಳನ್ನು ಮತಾಂತರ ಮಾಡುವ ಧಂದೆಗೆ ಈ ಕಾನೂನಿಂದ ದೊಡ್ಡ ಅಘಾತ ಆಗಿದೆ : ಜಗದೀಶ್ ಶೇಣವ

Wednesday, December 22nd, 2021
Jagadisha Senava

ಮಂಗಳೂರು : ಅನೇಕ ಮತಾಂತರದ ಮಿಷನರಿಗಳು ಅತೀ ಬಡವ ಹಿಂದುಗಳನ್ನು ಬಲವಂತ, ಆಮಿಷ ಆಸೆಯೊಡ್ಡಿ ಮತಾಂತರ ಮಾಡಿದೆ  ಅಂತಹವರಿಗೆ ಈ ಕಾನೂನಿಂದ ದೊಡ್ಡ ಅಘಾತ ಆಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಶೇಣವ ಹೇಳಿದ್ದಾರೆ. ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು,  ಬಿಜೆಪಿ ಕಾರ್ಯಕರ್ತರ ಬಹುನಿರೀಕ್ಷಿತ ಮತಾಂತರ ಮಸೂದೆ ಮಂಡಿಸಿದ್ದು, ಈ ಕಾಯ್ದೆ ಮಂಡಿಸಿದ ಬೊಮ್ಮಾಯಿ ಸರ್ಕಾರಕ್ಕೆ ದ‌ಕ ಜಿಲ್ಲಾ ಬಿಜೆಪಿ ಅಭಿನಂದನೆ ಸಲ್ಲಿಸುತ್ತದೆ ಎಂದು ಶೇಣವ ಹೇಳಿದರು. ಕೇವಲ ಒಂದು ಸಾವಿರ ಎರಡು ಸಾವಿರ ರೂಪಾಯಿ, ಐನೂರು ರೂಪಾಯಿ ಮಾತ್ರೆ ನೀಡಿ. ಅದರಿಂದ ಕಾಯಿಲೆ […]

ಬಾಂಗ್ಲಾದೇಶದಲ್ಲಿ ಇಸ್ಕಾನ್‌ ದೇವಾಲಯದ ಮೇಲೆ ದಾಳಿ, ಮಂಗಳೂರಿನಲ್ಲಿ ಇಸ್ಕಾನ್‌ ಭಕ್ತರ ಪ್ರತಿಭಟನೆ

Tuesday, October 26th, 2021
iskcon

ಮಂಗಳೂರು : ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದಾಳಿ ಖಂಡಿಸಿ, ನಗರದ ಆರ್ಯಸಮಾಜ ರಸ್ತೆಯ ಇಸ್ಕಾನ್‌ ಮಂದಿರ ವತಿಯಿಂದ ಮಂಗಳವಾರ ಕೃಷ್ಣನ ಕೀರ್ತನೆಗಳನ್ನು ಹಾಡಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ  ಮಂದಿರದ ಅಧ್ಯಕ್ಷ ಕಾರುಣ್ಯ ಸಾಗರದಾಸ್‌, ಬಾಂಗ್ಲಾದೇಶದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮೇಲಿನ ದಾಳಿ ಅಮಾನುಷವಾದದ್ದು. ಅಲ್ಲಿನ ಹಿಂದುಗಳಿಗೆ ಬೆಂಬಲ ನೀಡಬೇಕು ಎನ್ನುವ ಉದ್ದೇಶದಿಂದ ವಿಶ್ವಾದ್ಯಂತ ಇಸ್ಕಾನ್‌ ದೇವಾಲಯಗಳಲ್ಲಿ ಈ ಪ್ರತಿಭಟನೆ ಆಯೋಜಿಸಲಾಗುತ್ತಿದೆ. ಜಾತಿ ಬೇಧ ಇಲ್ಲದೆ, ಎಲ್ಲರನ್ನು ಒಟ್ಟು ಸೇರಿಸಿ ಮುಂದುವರಿಯುವುದು ಇಸ್ಕಾನ್‌ನ ಆಶಯ. ಆದರೆ […]

ಎನ್‌ಆರ್‌ಸಿಯಿಂದ ಸಂಕಷ್ಟಗೊಳಗಾಗುವವರಲ್ಲಿ ಹಿಂದುಗಳೇ ಜಾಸ್ತಿ

Monday, January 20th, 2020
communist

ಮಂಗಳೂರು : ’ಪೌರತ್ವ ತಿದ್ದುಪಡಿ ಕಾಯದೆ(ಸಿಎಎ), ರಾಷ್ಟ್ರೀಯ ಪೌರತ್ವ ರಿಜಿಸ್ಟ್ರಿ(ಎನ್‌ಆರ್‌ಸಿ), ರಾಷ್ಟ್ರೀಯ ಜನರ ರಿಜಿಸ್ಟ್ರಿ(ಎನ್ ಪಿ ಆರ್) ಮುಂತಾದುವುಗಳು ಅನಗತ್ಯ ಕ್ರಮಗಳಾಗಿದ್ದು, ಇದರಿಂದ ಜನರ ಸಂಕಷ್ಟಗಳು ಹೆಚ್ಚಾಗಲಿವೆ. ಇವೆಲ್ಲದರಿಂದ ಮುಸ್ಲಿಮರಿಗೆ ಮಾತ್ರ ಸಮಸ್ಯೆಗಳಾಗಲಿವೆ ಮತ್ತು ಹಿಂದುಗಳು ಇದರ ಬಗ್ಗೆ ಬಯಪಡಬೇಕಾಗಿಲ್ಲ ಎಂದು ಜನರ ಮಧ್ಯೆ ಅಪಪ್ರಚಾರ ನಡೆಯುತ್ತಿದೆ. ಆದರೆ ಈ ಕ್ರಮಗಳಿಂದ ಹಿಂದುಗಳಿಗೆ ಹೆಚ್ಚು ಅನಾನುಕೂಲವಾಗಲಿದೆ. ಅಸ್ಸಾಂದಲ್ಲಿ ಓಖಅ ನಡೆದು 19.01ಲಕ್ಷ ಜನರು ಪೌರತ್ವದಿಂದ ಹೊರಗುಳಿದಿದ್ದಾರೆ. ಅವರಲ್ಲಿ ಶೇಕಡಾ 75 ಅಂದರೆ 12.5 ಲಕ್ಷ ಜನ ಹಿಂದುಗಳಾಗಿದ್ದಾರೆ. […]

‘ಭಾರತದ ಪ್ರತಿಯೊಬ್ಬ ನಾಗರಿಕನೂ ಹಿಂದುವೇ’ : ಮೋಹನ್​ ಭಾಗವತ್​​

Thursday, December 26th, 2019
RSS

ಹೈದರಾಬಾದ್ : ಭಾರತದ ಪ್ರತಿಯೊಬ್ಬ ನಾಗರೀಕನೂ ಹಿಂದುವೇ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ಧಾರೆ. ಇಂದು ಹೈದರಾಬಾದ್‍ನಲ್ಲಿ ಆರ್ಎಸ್ಎಸ್ನ ಕಾರ್ಯಾಗಾರದಲ್ಲಿ ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಭಾರತದ ಎಲ್ಲಾ 130 ಕೋಟಿ ಜನರೂ ಹಿಂದೂಗಳೇ. ಯಾವುದೇ ಭಾಷೆ ಮಾತಾಡಲಿ; ಯಾವುದೇ ದೇವರನ್ನಾದರೂ ನಂಬಲಿ; ಭಾರತದಲ್ಲಿ ಯಾವುದೇ ಮೂಲೆಯಲ್ಲಾದರೂ ನೆಲೆಸಿರಲಿ ಎಲ್ಲರೂ ಹಿಂದುಗಳೇ ಎಂಬ ಸಂದೇಶ ಸಾರಿದ್ದಾರೆ. ಭಾರತದ ಜಲ, ಕಾಡು, ಪ್ರಾಣಿ, ಮಣ್ಣನ್ನು ಹಿಂದೂ ಪ್ರೀತಿಸುತ್ತಾನೆ. ನಿಜವಾದ […]

ಹಿಂದು ವಿರೋಧಿ ಪಠ್ಯಪುಸ್ತಕವನ್ನು ಕೂಡಲೇ ಹಿಂಪಡೆಯಿರಿ: ಸಿ.ಟಿ. ರವಿ

Tuesday, June 5th, 2018
c-t-ravi-2

ಮಂಗಳೂರು: ಹೊಸತಾಗಿ ರಚನೆಯಾದ ಶಾಲಾ ಪಠ್ಯ ಪುಸ್ತಕದಲ್ಲಿ ಏಸು ಕ್ರಿಸ್ತ ಮತ್ತು ಮಹಮ್ಮದ್ ಪೈಗಂಬರ್ ಬಗ್ಗೆ ಪಾಟ ಸೇರ್ಪಡೆ ಯಾಗಿರುವುದು ಕರಾವಳಿಯಲ್ಲಿ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಮೊದಲ ಪಾಠವೇ ಕ್ರಿಶ್ಚಿಯನ್ ಮತದ ಉಗಮ, ಕೊಡುಗೆಗಳ ಬಗೆಗಿದೆ. ಅಲ್ಲದೆ, ಮತ್ತೊಂದು ಪಾಠದಲ್ಲಿ ಏಸು ಕ್ರಿಸ್ತನ ಜೀವನ ಚರಿತ್ರೆಯನ್ನೂ ಹೇಳಲಾಗಿದ್ದು, ಚರ್ಚ್ ಮತ್ತು ಕ್ರಿಸ್ತ ಮತದ ಬಗ್ಗೆ ತಿಳಿದುಕೊಳ್ಳಲು ಹತ್ತಿರದ ಚರ್ಚ್ ಗೆ ತೆರಳುವಂತೆ ಮಕ್ಕಳಿಗೆ ಸೂಚಿಸಲಾಗಿದೆ. ಪುಸ್ತಕದ ಇನ್ನೊಂದು ಪಠ್ಯದಲ್ಲಿ […]

ಗೋಭಕ್ಷಣೆ ಮಾಡುವವರು ಹಿಂದುಗಳಲ್ಲ : ಮೋಹನ್ ಭಟ್

Friday, June 30th, 2017
Mohan Bhat

ಉಡುಪಿ :  ಗೋಭಕ್ಷಣೆ ಮಾಡುವವರು ಹಿಂದುಗಳಲ್ಲ,  ಹಿಂದೂಗಳು ಗೋಭಕ್ಷಣೆ ಮಾಡುತ್ತಾರೆ ಎಂಬ ಪೇಜಾವರ ಸ್ವಾಮೀಜಿಯ ಹೇಳಿಕೆಯನ್ನು ನಾವು ಒಪ್ಪುದಿಲ್ಲ ಎಂದು ಶ್ರೀರಾಮಸೇನೆ ಮಂಗಳೂರು ವಿಭಾಗದ ಕಾರ್ಯದರ್ಶಿ ಮೋಹನ್ ಭಟ್ ತಿಳಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದ ಆವರಣದಲ್ಲಿ ನಮಾಝ್ ಮಾಡಲು ಅವಕಾಶ ನೀಡಿರುವುದನ್ನು ವಿರೋಧಿಸಿ ಜು.2ರಂದು ಉಡುಪಿ ಕ್ಲಾಕ್ ಟವರ್‌ಎದುರು ಶ್ರೀಕೃಷ್ಣ ದೇವರಿಗೆ ಪ್ರಾರ್ಥಿಸಿ ಭಜನೆ ಮಾಡುವ ಮೂಲಕ ಪ್ರತಿಭಟನೆ ಮಾಡಲಿದ್ದೇವೆ ಎಂದು ಹೇಳಿದರು. ಮುಸ್ಲಿಮರು ಮಠದ ಆವರಣದಲ್ಲಿ ನಮಾಝ್ ಮಾಡುವ ಮೂಲಕ ಅಶುದ್ಧಿಯಾಗಿರುವ ಶ್ರೀಕೃಷ್ಣ ಮಠದ […]