ಫರಂಗಿಪೇಟೆಯಲ್ಲಿ ಬಸ್‌ಗಳ ಮೇಲೆ ಕಲ್ಲು ತೂರಾಟ…ರೈ ಸಾಮರಸ್ಯ ನಡಿಗೆಗೆ ಆರಂಭದಲ್ಲೇ ವಿಘ್ನ

10:47 AM, Tuesday, December 12th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

firangipeteಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆಯಲ್ಲಿ ಇಂದು ಸಚಿವ ಬಿ‌.ರಮಾನಾಥ್ ರೈ ನೇತೃತ್ವದಲ್ಲಿ ಸಾಮರಸ್ಯ ನಡಿಗೆಗೆ ಚಾಲನೆ ಸಿಗುವ ಮುನ್ನವೇ ವಿಘ್ನ ಎದುರಾಗಿದೆ.

ಫರಂಗಿಪೇಟೆಯಲ್ಲಿ ಕೆಎಸ್‌ಆರ್‌ಟಿಸಿಯ ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು‌ ತೂರಾಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದೆ. ಕಲ್ಲು ತೂರಾಟದಿಂದ ಹೆಚ್ಚಿನ‌ ಗಾಯಗಳಾಗದೆ ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಚಿವ ರೈ ಅವರ ಸಾಮರಸ್ಯ ನಡಿಗೆ ಫರಂಗಿಪೇಟೆಯಿಂದ ಕಲ್ಲಡ್ಕ ಮಾರ್ಗವಾಗಿ ಮಾಣಿಯವರೆಗೆ ನಡೆಯಲಿದ್ದು, ಶಾಂತಯುತವಾಗಿ ಸಾಗಬೇಕಾಗಿದ್ದ ಜಾಥಾಕ್ಕೆ ಆರಂಭದಲ್ಲೇ ದುಷ್ಕರ್ಮಿಗಳಿಂದ‌ ವಿಘ್ನ ಎದುರಾಗಿದೆ.

ಸಚಿವ ರೈ ನೇತೃತ್ವದ ಸಾಮರಸ್ಯ ನಡಿಗೆಗೆ ನಟ ಪ್ರಕಾಶ್ ರಾಜ್ ಸೇರಿದಂತೆ ಸಿಪಿಎಂ ಮುಖಂಡರು ಸಾಥ್ ನೀಡಲಿದ್ದಾರೆ. ಸಾಮರಸ್ಯ ನಡಿಗೆ ಹಿನ್ನಲೆ 1000 ಕ್ಕೂ ಹೆಚ್ಚು ಪೊಲೀಸರು, 300KSRP ಪೊಲೀಸರು ಸೇರಿದಂತೆ ಠಾಣಾ ವ್ಯಾಪ್ತಿಯ ಪೊಲೀಸರಿಂದ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English