ಮಂಗಳೂರು: ಬೇಟೆಗೆ ಹೋಗಿ ನಾಪತ್ತೆಯಾಗಿದ್ದ ಇಬ್ಬರು ಯುವಕರ ಶವ ಮೂಡುಬಿದಿರೆಯ ಕರಿಂಜೆ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದೆ.
ಸೋಮವಾರ ಸಂಜೆ ಪ್ರವೀಣ್ ತೌರೋ ಮತ್ತು ಗ್ರೇಷನ್ ಬೇಟೆಗೆ ತೆರಳಿದ್ದರು. ಆದರೆ ನಾಲ್ಕು ದಿನವಾದರೂ ಇವರ ಸುಳಿವಿರಲಿಲ್ಲ. ಹೀಗಾಗಿ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.
ಹೀಗಾಗಿ ನಾಪತ್ತೆಯಾಗಿದ್ದ ಯುವಕರ ಪತ್ತೆಗಾಗಿ ಮೂಡುಬಿದಿರೆ ಪೊಲೀಸರು ಬೆಳ್ಳಗೆಯಿಂದ ಹುಡುಕಾಟ ಆರಂಭಿಸಿದ್ದರು. ಈ ವೇಳೆ ಕರಿಂಜೆ ಕಾಡಿನೊಳಗೆ ಇವರ ಶವ ಪತ್ತೆಯಾಗಿದ್ದು, ಕಾಡು ಪ್ರಾಣಿ ಬೇಟೆಗೆ ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿ ತಗುಲಿ ಇವರಿಬ್ಬರು ಸಾವನಪ್ಪಿದ್ದಾರೆ.
Click this button or press Ctrl+G to toggle between Kannada and English