ಮಂಗಳೂರು: ಪ್ರೇಮ ವೈಫಲ್ಯದಿಂದ ಮನನೊಂದು ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಪಕ್ಷಿಕೆರೆ ಪೆಟ್ರೋಲು ಬಂಕ್ ಬಳಿಯ ಮನೆಯೊಂದರಲ್ಲಿ ನಡೆದಿದೆ.
ಗುರುಪ್ರಸಾದ ಶೆಟ್ಟಿಗಾರ (26) ಎಂಬಾತನೆ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಪಕ್ಷಿಕೆರೆಯ ಪೆಟ್ರೋಲು ಬಂಕಿನ ಎದುರುಗಡೆ ಇರುವ ರಸ್ತೆಯ ಬದಿಯಲ್ಲಿ ವರ್ಕ್ಶಾಪ್ ನಡೆಸುತ್ತಿದ್ದ. ಸೋಮವಾರ ತನ್ನ ಮನೆಯ ಕೋಣೆಯ ಪ್ಯಾನ್ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಮನೆಯಲ್ಲಿ ಯಾರೂ ಇಲ್ಲದಾಗ ಗುರುಪ್ರಸಾದ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಗುರುಪ್ರಸಾದ್ಗೆ ಕಳೆದ ಕೆಲ ದಿನದ ಹಿಂದೆ ಸ್ಥಳೀಯ ಯುವತಿಯೊಬ್ಬಳ ಜೊತೆ ನಿಶ್ಚಿತಾರ್ಥವಾಗಿತ್ತು. ಆದರೆ ಈತ ಕಳೆದ ಮೂರು ವರ್ಷಗಳ ಹಿಂದೆ ಸ್ಥಳೀಯ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.
Click this button or press Ctrl+G to toggle between Kannada and English