ರೆಡ್ಡಿ ಸೋದರರನ್ನು ಶೋಲೆ ಚಿತ್ರದ ಪಾತ್ರಗಳಿಗೆ ಹೋಲಿಸಿದ ರಾಹುಲ್‌

4:14 PM, Tuesday, May 8th, 2018
Share
1 Star2 Stars3 Stars4 Stars5 Stars
(No Ratings Yet)
Loading...

rahul-gandhiಚಿಕ್ಕಬಳ್ಳಾಪುರ: ಬಿಜೆಪಿ, ಆರ್‌ಎಸ್ಎಸ್ ಬಡವರ ಬಗ್ಗೆ ಕಾರ್ಯಕ್ರಮ ಮಾಡ್ತಿಲ್ಲ. ಬಡವರ ವಿರೋಧಿ ಕೆಲಸ ಮಾಡ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದರು.

ಗೌರಿಬಿದನೂರಿನಲ್ಲಿ ಮಾತನಾಡಿದ ರಾಹುಲ್, ಬಿಜೆಪಿ ಜಾತಿ, ಧರ್ಮ, ಭಾಷೆಯ ಹೆಸರಲ್ಲಿ ಕರ್ನಾಟಕವನ್ನು ಇಬ್ಭಾಗ ಮಾಡಲು ಹೊರಟಿದೆ. ಸೂಟು ಬೂಟು ಹಾಕಿಕೊಂಡವರಿಗೆ ಮಾತ್ರ ಪ್ರಧಾನಿ ಕಚೇರಿ ಬಾಗಿಲು ತೆರೆಯುತ್ತೆ ಎಂದು ಲೇವಡಿ ಮಾಡಿದರು.

ಇದೇ ವೇಳೆ ಶೋಲೆ ಸಿನಿಮಾದ ಗಬ್ಬರ್, ಸಾಂಬಾ, ಕಾಲಿಯಾ ಪಾತ್ರಗಳನ್ನು ರಾಹುಲ್ ನೆನಪಿಸಿದರು. ಪ್ರಧಾನಿ ಮೋದಿ ಅವರು ರೆಡ್ಡಿ ಬ್ರದರ್ಸ್‌ರಂತಹ ಭ್ರಷ್ಟ ಗಬ್ಬರ್, ಸಾಂಬಾ, ಕಾಲಿಯಾರನ್ನು ವಿಧಾನಸೌಧಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಲ್ಲಿ ರೋಡ್ ಶೋ ನಡೆಸಿ ಶಾಸಕ ಎನ್.ಹೆಚ್.ಶಿವಶಂಕರರೆಡ್ಡಿ ಪರ ಚುನಾವಣಾ ಪ್ರಚಾರ ನಡೆಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English