ಸಾಮಾನ್ಯರಂತೆ ಹೋಟೆಲ್‌‌ನಲ್ಲಿ ಊಟ ಸವಿದ ನಾಗಾಲ್ಯಾಂಡ್‌‌‌ ರಾಜ್ಯಪಾಲ..!

9:50 AM, Friday, May 25th, 2018
Share
1 Star2 Stars3 Stars4 Stars5 Stars
(No Ratings Yet)
Loading...

governerಮಂಗಳೂರು: ಮೂಲತಃ ಉಡುಪಿ ಜಿಲ್ಲೆಯವರಾದ ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಅವರು ಸಾಮಾನ್ಯರಂತೆ ಮಂಗಳೂರಿನ ತಾಜ್‌‌ಮಹಲ್ ಹೋಟೆಲ್‌‌ನಲ್ಲಿ ಊಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ರಾಜ್ಯಪಾಲರಿಗೆ ವಿಶೇಷ ಭದ್ರತೆಯಿರುವುದರಿಂದ ಸಾಮಾನ್ಯವಾಗಿ ಆ ಹುದ್ದೆಯಲ್ಲಿರುವವರು ಜನಸಾಮಾನ್ಯರೊಂದಿಗೆ ಇರುವುದು ಬಹಳ ವಿರಳ. ಆದರೆ ಪಿ.ಬಿ. ಆಚಾರ್ಯ ಅವರು ಮಂಗಳೂರಿನ ತಾಜ್‌‌ಮಹಲ್ ಹೋಟೆಲ್‌‌ನಲ್ಲಿ ಸಾಮಾನ್ಯರಂತೆ ಬೆರೆತು ಊಟ ಮಾಡಿದರು.

ಎರಡು ದಿನಗಳ ಕರಾವಳಿ ಪ್ರವಾಸದಲ್ಲಿರುವ ಪಿ.ಬಿ. ಆಚಾರ್ಯ ಪತ್ನಿ ಕವಿತಾ ಆಚಾರ್ಯ ಮತ್ತು ಸಂಬಂಧಿ ನಾರಾಯಣ ಜೊತೆ ಊಟ ಮಾಡಲು ಈ ಹೋಟೆಲ್‌‌ಗೆ ಬಂದಿದ್ದರು. ಬೆಳ್ತಗಿ ಅಕ್ಕಿ ಊಟ, ಪೂರಿ ಮತ್ತು ಪತ್ರೊಡೆ ಸವಿದ ಅವರು, ಊಟದ ನಂತರ ಸಿಹಿ ತಿಂಡಿ ಖರೀದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English