ಕಾನೂನು ಹೋರಾಟದಲ್ಲೂ ನಾನು ಗೆಲುವು ಸಾಧಿಸುತ್ತೇನೆ: ಮುನಿರತ್ನ

3:38 PM, Thursday, May 31st, 2018
Share
1 Star2 Stars3 Stars4 Stars5 Stars
(No Ratings Yet)
Loading...

muniratnaಬೆಂಗಳೂರು: ಇನ್ನುಮುಂದೆ ಕ್ಷೇತ್ರದಲ್ಲಿ ಯಾವ ಗೊಂದಲವೂ ಇರಲ್ಲ. ನನ್ನ ಕಡೆಯಿಂದ ಯಾವುದೇ ಗೊಂದಲ ಸೃಷ್ಟಿಯಾಗಲ್ಲ ಎಂದು ರಾಜರಾಜೇಶ್ವರಿ ನಗರದ ವಿಜೇತ ಕಾಂಗ್ರೆಸ್ ಶಾಸಕ ಮುನಿರತ್ನ ಹೇಳಿದ್ದಾರೆ.

ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳಿಂದ ಪ್ರಮಾಣಪತ್ರ ಸ್ವೀಕರಿಸಿ ಮಾತನಾಡಿದ ಮುನಿರತ್ನ, ನಾನು ಕಾನೂನು ಹೋರಾಟದಲ್ಲೂ ಗೆಲವು ಸಾಧಿಸುತ್ತೇನೆ ಎಂದು ಹೇಳಿದರು.

ಸ್ವಾರ್ಥ ರಾಜಕಾರಣಕ್ಕಾಗಿ ಕೆಲವರು ನನ್ನ ವಿರುದ್ಧ ವೃಥಾ ಆರೋಪ ಮಾಡಿದರು. ನನ್ನ ವಿರುದ್ಧ ಸುಳ್ಳು ದೂರು ಸೃಷ್ಟಿಸಿದರು. ಅವರೆಲ್ಲರೂ ರಾಜಕೀಯ ದುರುದ್ದೇಶ ಬಿಡಲಿ. ಅವರೆಲ್ಲರೂ ತಮ್ಮ ರಾಜಕೀಯ ದುರುದ್ದೇಶ ಬಿಟ್ಟು ಕೈಜೋಡಿಸಿದರೆ ನೆಮ್ಮದಿ ಎಂದು ಹೇಳಿದರು.

ಕಾನೂನು ಹೋರಾಟದಲ್ಲೂ ನಾನು ಗೆಲುವು ಸಾಧಿಸುತ್ತೇನೆ. ಕಾನೂನು ಚೌಕಟ್ಟಿನಲ್ಲಿಯೇ ನಾನು ಹೋರಾಟ ನಡೆಸ್ತೇನೆ ಎಂದು ವಿಜೇತ ಶಾಸಕ ಮುನಿರತ್ನ ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English