ಗುಡ್ಡದಲ್ಲಿ ಜೂಜಾಟ..7 ಮಂದಿ ಪೊಲೀಸರ ವಶಕ್ಕೆ!

3:21 PM, Friday, August 10th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

mangaluruಮಂಗಳೂರು: ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದಲ್ಲಿ ಸರ್ಕಾರಿ ಗುಡ್ಡದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ 7 ಮಂದಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಬಾರ್ಯ ಗ್ರಾಮದ ಮರ್ಜಾಳ ಎಂಬಲ್ಲಿರುವ ಸರ್ಕಾರಿ ಗುಡ್ಡದಲ್ಲಿ ಇವರು ಜೂಜಾಟವಾಡುತ್ತಿದ್ದರು ಎನ್ನಲಾಗಿದೆ. ಬಂಧಿತರನ್ನು ತಣ್ಣೀರುಪಂಥ ಗ್ರಾಮ ಪಂಚಾಯತ್ ಸದಸ್ಯ ಆದಂ(42), ಇಕ್ಬಾಲ್ (38), ಮಹಮ್ಮದ್ ಶಫಿ (23) , ಸುಂದರ ಆಚಾರಿ (35), ಲಕ್ಷ್ಮಣ(35), ಸತೀಶ್ (40) , ನವೀನ್ (42) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಸುಮಾರು 21,510 ನಗದು, 3 ಮೋಟಾರು ಸೈಕಲ್‌ ಹಾಗೂ ಒಂದು ಕಾರು ವಶಪಡಿಸಿಕೊಳ್ಳಲಾಗಿದೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English