ಗುಡ್ಡದಲ್ಲಿ ಜೂಜಾಟ..7 ಮಂದಿ ಪೊಲೀಸರ ವಶಕ್ಕೆ!

Friday, August 10th, 2018
mangaluru

ಮಂಗಳೂರು: ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದಲ್ಲಿ ಸರ್ಕಾರಿ ಗುಡ್ಡದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ 7 ಮಂದಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಾರ್ಯ ಗ್ರಾಮದ ಮರ್ಜಾಳ ಎಂಬಲ್ಲಿರುವ ಸರ್ಕಾರಿ ಗುಡ್ಡದಲ್ಲಿ ಇವರು ಜೂಜಾಟವಾಡುತ್ತಿದ್ದರು ಎನ್ನಲಾಗಿದೆ. ಬಂಧಿತರನ್ನು ತಣ್ಣೀರುಪಂಥ ಗ್ರಾಮ ಪಂಚಾಯತ್ ಸದಸ್ಯ ಆದಂ(42), ಇಕ್ಬಾಲ್ (38), ಮಹಮ್ಮದ್ ಶಫಿ (23) , ಸುಂದರ ಆಚಾರಿ (35), ಲಕ್ಷ್ಮಣ(35), ಸತೀಶ್ (40) , ನವೀನ್ (42) ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 21,510 ನಗದು, 3 ಮೋಟಾರು ಸೈಕಲ್‌ ಹಾಗೂ ಒಂದು […]

ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ..ಮೂವರು ಬಂಧನ!

Tuesday, July 3rd, 2018
arrested

ಪುತ್ತೂರು: ಗಾಂಜಾ ಮಾರಾಟ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬೆಳ್ಳಾರೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೇಲೂರು ತಾಲೂಕು ಹಳೇಬೀಡು ಕೆರೆಕ್ಕೋಡಿ ಸಂತೆ ಮೈದಾನದ ನಿವಾಸಿ ಸಾಧಿಕ್ (35), ಸುಳ್ಯ ಐವತ್ತೊಕ್ಲು ಜನತಾ ಕಾಲೋನಿ ನಿವಾಸಿ ಮಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಕು (25), ಸುಳ್ಯ ಕಳಂಜ ಗ್ರಾಮದ ವಿಷ್ಣು ನಗರ ನಿವಾಸಿ ಮಹಮ್ಮದ್ ನೌಸಾದ್ ಅಲಿಯಾಸ್ ನೌಸು ಬಂಧಿತ ಆರೋಪಿಗಳು. ಬಂಧಿತರಿಂದ 20,000 ರೂ. ಮೌಲ್ಯದ 950 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ […]

ಮಂಗಳೂರು ವಿದ್ಯಾರ್ಥಿನಿ ನಾಪತ್ತೆ… ಲವ್‌ ಜಿಹಾದ್‌ ಶಂಕೆ

Tuesday, January 2nd, 2018
SDM-college

ಮಂಗಳೂರು: ಇತ್ತೀಚಿಗಷ್ಟೆ ಮದುವೆ ಮನೆಯಿಂದ ಪರಾರಿಯಾದ ಘಟನೆ ಹಸಿಯಾಗಿರುವಾಗಲೇ ಮತ್ತೊಂದು ಲವ್‌ ಜಿಹಾದ್ ಪ್ರಕರಣ ನಡೆದಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಕಾನೂನು ಪದವಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಕಳೆದ 5 ತಿಂಗಳಿನಿಂದ ನಾಪತ್ತೆಯಾಗಿದ್ದಾಳೆ. ಈಕೆ ಇಕ್ಬಾಲ್ ಎಂಬಾತನೊಂದಿಗೆ ಮುಂಬೈಗೆ ತೆರಳಿರಬಹುದು ಎಂದು ಆಕೆಯ ಪಾಲಕರು ಶಂಕಿಸಿದ್ದಾರೆ. ಕಾಸರಗೋಡಿನ ಹಿಂದು ಸಂಘಟನೆಯ ಮುಖಂಡರೊಬ್ಬರ ಪುತ್ರಿ ಮಂಗಳೂರಿನಲ್ಲಿ ಕಾನೂನು ಪದವಿ ಓದುತ್ತಿದ್ದು, ಐದು ತಿಂಗಳಿನಿಂದ ನಾಪತ್ತೆಯಾಗಿದ್ದಾಳೆ. ಈಕೆಗೆ ಮೂರು ವರ್ಷಗಳ ಹಿಂದೆ ಫೇಸ್‌ಬುಕ್ ಮೂಲಕ ಮುಂಬೈನ ಮನ್ಖದರ್‌ ಎಂಬಲ್ಲಿನ ಇಕ್ಬಾಲ್ […]