ವಿದ್ವತ್ ಮೇಲೆ ಹಲ್ಲೆ ಪ್ರಕರಣ: 3ನೇ‌ ಆರೋಪಿ ಶ್ರೀಕೃಷ್ಣನಿಂದ ವಿದ್ವತ್​ಗೆ ನಿರಂತರ ಕರೆ?

1:13 PM, Thursday, November 22nd, 2018
Share
1 Star2 Stars3 Stars4 Stars5 Stars
(No Ratings Yet)
Loading...

nalapadಬೆಂಗಳೂರು: ವಿದ್ವತ್ ಮೇಲೆ ನಲಪಾಡ್ ಗ್ಯಾಂಗ್ ಯುಬಿ ಸಿಟಿಯಲ್ಲಿ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಶ್ರೀಕೃಷ್ಣ ಪ್ರಕರಣದಲ್ಲಿ ರಾಜಿ ಮಾಡಿಕೋ ಎಂದು ಪದೇ ಪದೆ ವಿದ್ವತ್ಗೆ ಕರೆ ಮಾಡುತ್ತಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಇದರಿಂದ ವಿದ್ವತ್ ತನಗೆ ಜೀವ ಬೆದರಿಕೆ ಇದೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಈ ಹಿನ್ನೆಲೆ ವಿದ್ವತ್ಗೆ ಭದ್ರತೆ ನೀಡುವಂತೆ ಸಂಜಯ್ ನಗರ ಪೊಲೀಸರಿಗೆ ಸಿಸಿಬಿ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಜೊತೆಗೆ ಆರೋಪಿ ಶ್ರೀಕೃಷ್ಣ ವಿದ್ವತ್ಗೆ ನಿರಂತರ ವಾಟ್ಸಪ್ ಕರೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆತನ ಜಾಮೀನು ರದ್ದುಗೊಳಿಸುವಂತೆ ಕೋರ್ಟ್ನಲ್ಲಿ‌ ಅರ್ಜಿ ಹಾಕಲು ಕಬ್ಬನ್ ಪಾರ್ಕ್ ಪೊಲೀಸರಿಗೆ ಸಿಸಿಬಿ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ವಿದ್ವತ್ ಮೇಲೆ ಹಲ್ಲೆ ಪ್ರಕರಣದಲ್ಲಿ ಕೃಷ್ಣ A3 ಆರೋಪಿಯಾಗಿದ್ದು, ವಿದ್ವತ್ಗೆ ಹಲ್ಲೆ ನಡೆಸಿದ ನಂತರ ತಲೆಮರೆಸಿಕೊಂಡು ಹೈಕೋರ್ಟ್ನಿಂದ ಜಾಮೀನು ಪಡೆದಿದ್ದ. ಕಳೆದ ಫೆ. 17 ರಂದು ಯುಬಿ ಸಿಟಿಯ ಫರ್ಜಿ‌ ಕೆಫೆಯಲ್ಲಿ‌ ವಿದ್ವತ್‌ ಮೇಲೆ ಹ್ಯಾರಿಸ್ ಮಗ ನಲಪಾಡ್ ಹಲ್ಲೆ ಮಾಡಿ ನೂರು ದಿನಗಳಿಗೂ ಹೆಚ್ಚು ದಿನ ಜೈಲುವಾಸ ಅನುಭವಿಸಿದ್ದ. ಇದೀಗ ಪ್ರಕರಣದ ಮೂರನೇ ಆರೋಪಿ ಮತ್ತೆ ತನ್ನ ಕಿರಿಕ್ ಶುರು ಮಾಡಿದ್ದಾನೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English