ಡೀಸೆಲ್‌ ಸಾಲ ನೀಡದಕ್ಕೆ ಬಂಕ್‌ ಕ್ಯಾಶಿಯರ್‌ ಮೇಲೆ ಹಲ್ಲೆ

2:00 PM, Wednesday, January 9th, 2019
Share
1 Star2 Stars3 Stars4 Stars5 Stars
(No Ratings Yet)
Loading...

Petrol-bunkಕಾಪು: ಸಾಲ ರೂಪದಲ್ಲಿ ಡೀಸೆಲ್‌ ಹಾಕಲೊಪ್ಪದ ಪೆಟ್ರೋಲ್‌ ಬಂಕ್‌ನ ಕ್ಯಾಶಿಯರ್‌ಗೆ ಮಿನಿ ಬಸ್‌ ಮಾಲಕ ಹಲ್ಲೆ ನಡೆದ ಘಟನೆ ಉದ್ಯಾವರ ದಲ್ಲಿ ಸೋಮವಾರ ನಡೆದಿದೆ. ಉದ್ಯಾವರ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ನ ಕ್ಯಾಶಿಯರ್‌ ಬಂಟಕಲ್ಲು ನಿವಾಸಿ ಸುರೇಶ್‌ ಬಿ. ಶೇರಿಗಾರ್‌ ಹಲ್ಲೆಗೊಳಗಾದ ವ್ಯಕ್ತಿ.

ನಿಶಾಂತ್‌ ಕರ್ಕಡ ಹಲ್ಲೆಡ ನಡೆಸಿದ ಆರೋಪಿ. ಆರೋಪಿ ನಿಶಾಂತ್‌ ಕರ್ಕಡ ಜ. 7ರಂದು ಸುರೇಶ್‌ ಶೇರಿಗಾರ್‌ ಅವರಿಗೆ ಮೊಬೈಲ್‌ ಕರೆ ಮಾಡಿ ತನ್ನ ಮಿನಿ ಬಸ್‌ಗೆ 1,000 ರೂ. ಮೊತ್ತದ ಡೀಸೆಲ್‌ ಹಾಕುವಂತೆ ಮತ್ತು ಅದರ ಹಣವನ್ನು ಮತ್ತೆ ನೀಡುವುದಾಗಿ ತಿಳಿಸಿದ್ದನು. ಆದರೆ ಕ್ಯಾಶಿಯರ್‌ ಸುರೇಶ್‌ ಅವರು ಸಂಜೆಯ ಒಳಗೆ ಹಣ ನೀಡುವುದಾದರೆ ಮಾತ್ರ ಡೀಸೆಲ್‌ ಹಾಕುವುದಾಗಿ ತಿಳಿಸಿದ್ದರು.

ಇದನ್ನೇ ನೆಪವಾಗಿಸಿಕೊಂಡ ಆರೋಪಿ ನಿಶಾಂತ್‌ ಕರ್ಕಡ ತನ್ನ ಸ್ಕೂಟರ್‌ ಮೂಲಕ ಪೆಟ್ರೋಲ್‌ ಬಂಕ್‌ಗೆ ಬಂದು ಕ್ಯಾಶಿಯರ್‌ಗೆ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದು, ಹಲ್ಲೆ ಬಿಡಿಸಲು ಮುಂದಾದ ಕಾರ್ಮಿಕರಿಗೂ ಜೀವ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಲಾಗಿದೆ. ಆರೋಪಿ ಹೊಡೆದ ಪರಿಣಾಮ ಸುರೇಶ್‌ ಶೇರಿಗಾರ್‌ ಅವರಿಗೆ ಬಲ ತೋಳು ಮತ್ತು ಮೊಣಗಂಟಿನ ಹತ್ತಿರ ತರಚಿದ ಗಾಯ ಹಾಗೂ ಬೆನ್ನಿಗೆ, ಕುತ್ತಿಗೆಗೆ, ಸೊಂಟಕ್ಕೆ ಗುದ್ದಿದ ಒಳಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಪು ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English