ಚಿನ್ನ ಮರಳಿಸಿ ಮಾನವೀಯತೆ ಮೆರೆದ ಯುವತಿ

8:52 PM, Wednesday, June 26th, 2019
Share
1 Star2 Stars3 Stars4 Stars5 Stars
(No Ratings Yet)
Loading...

puttur girl ಪುತ್ತೂರು :  ರೂ.60 ಸಾವಿರ ಮೌಲ್ಯದ ಚಿನ್ನವನ್ನು ವಾರಸುದಾರರಿಗೆ ಹಿಂದುರಿಗಿಸಿದ ಯುವತಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಜೂ. 23ರಂದು ಎಪಿಎಂಸಿ ರಸ್ತೆಯಲ್ಲಿರುವ ಬಜಾಜ್ ಶೋರೂಮ್ ಉದ್ಯೋಗಿ ಅಶೋಕ್ ಎಂಬವರ ಚಿನ್ನದ ಬ್ರಾಸ್‍ಲೆಟ್ ಪುತ್ತೂರು -ಪುಣಚ ರಸ್ತೆಯಲ್ಲಿ ಕಳೆದುಹೋಗಿತ್ತು. ಈ ಚಿನ್ನದ ಬ್ರಾಸ್‍ಲೆಟ್ ಮುರ ನಿವಾಸಿ ಧನ್ವಂತರಿ ಆಸ್ಪತ್ರೆಯ ಉದ್ಯೋಗಿ ಚಂದ್ರಿಕಾ ಎಂಬವರಿಗೆ ಸಿಕ್ಕಿತ್ತು. ಅವರು ಈ ಚಿನ್ನವನ್ನು ವಾರಸುದಾರರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಅವರ ಈ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English