ಪ್ರೇಮಿಯಿಂದ ಇರಿತಕ್ಕೊಳಗಾಗಿದ್ದ ಯುವತಿ ತೀವ್ರನಿಗಾ ಘಟಕದಲ್ಲಿ, ಬಿಜೆಪಿ ಮುಖಂಡರಿಂದ ಸಾಂತ್ವನ

10:23 PM, Saturday, June 29th, 2019
Share
1 Star2 Stars3 Stars4 Stars5 Stars
(4 rating, 1 votes)
Loading...

deeksha ಮಂಗಳೂರು :  ಪ್ರೇಮಿಯಿಂದ ಇರಿತಕ್ಕೊಳಗಾಗಿದ್ದ ಯುವತಿ ದೇರಳಕಟ್ಟೆ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ವೆಂಟಿಲೇಟರ್ ಅಳವಡಿಸಲಾಗಿದ್ದು ಎದೆ,  ಹೊಟ್ಟೆ ಬಾಗಕ್ಕೆ ಇರಿದ ಪರಿಣಾಮ ತೀವ್ರ ರಕ್ತ ಸ್ರಾವ ಉಂಟಾಗಿದೆ.  ಸ್ಥಿತಿ ಗಂಭೀರವಾಗಿದ್ದರೂ ಆಕೆ ಶನಿವಾರ ಚಿಕಿತ್ಸೆಗೆ ಸ್ಪಂದಿಸುತ್ತಿದಾಳೆ ಎಂದು  ಆಸ್ಪತ್ರೆಯಲ್ಲಿದ್ದ ಕುಟುಂಬದ ಮೂಲಗಳು ತಿಳಿಸಿವೆ.

ಈ ಮಧ್ಯೆ ಬಿಜೆಪಿ ಮುಖಂಡರಾದ ಮಂಗಳೂರು ಕ್ಷೇತ್ರಾದ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹಾಗೂ ಚಂದ್ರಹಾಸ್ ಪಂಡಿತಹೌಸ್ ಭೇಟಿಯಾಗಿ ಧೈರ್ಯತುಂಬಿದರು. ಯುವತಿಯ ತಂದೆ ತಾಯಿ ಆಸ್ಪತ್ರೆಯಲ್ಲೇ ಇದ್ದು ಮಗಳ ಸುದ್ದಿ ಕೇಳಿ ತಾಯಿ ಕುಸಿದಿದ್ದರು.

deeksha ಯುವತಿಯ ಚಿಕಿತ್ಸೆಗೆ ಏಳು ವೈದ್ಯರು ಶ್ರಮವಹಿಸಿದ್ದಾರೆ 15 ಬಾಟಲ್ ರಕ್ತ , 12 ಬಾಟಲ್ ಎಫೆಕ್ಟಿವ್ , 10 ಬಾಟಲ್ ಗ್ಲುಕೋಸ್ ನೀಡಲಾಗಿದೆ ಎಂದು ಹೇಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಯುವತಿ ಮೃತಪಟ್ಟದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿತ್ತಿದ್ದು, ಈ ಕುರಿತು ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಈ ಸುದ್ದಿ ಸತ್ಯಕ್ಕೆ ದೂರವಾದುದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದಿದ್ದಾರೆ.

Deeksha

Deeksha

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English