ಮನೆಯ ಫ್ಯಾನ್ ಗೆ ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

Sunday, January 7th, 2024
deeksha

ಪುತ್ತೂರು : ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯಪದವು ಕನ್ನಡ್ಕದಲ್ಲಿ ನಡೆದಿದೆ. ಕನ್ನಡ್ಕ ನಿವಾಸಿ, ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಾ (16) ಮೃತ ಯುವತಿ. ದೀಕ್ಷಾ ಮನೆಯ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ದೀಕ್ಷಾ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿದ್ದು, ನಾಳೆ ಅವರಿಗೆ ಲ್ಯಾಬ್ ಪರೀಕ್ಷೆಯಿತ್ತು ಎಂದು ವರದಿಯಾಗಿದೆ. ಈಶ್ವರಮಂಗಲ ಹೊರಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರೇಮಿಯಿಂದ ಇರಿತಕ್ಕೊಳಗಾಗಿದ್ದ ಯುವತಿ ತೀವ್ರನಿಗಾ ಘಟಕದಲ್ಲಿ, ಬಿಜೆಪಿ ಮುಖಂಡರಿಂದ ಸಾಂತ್ವನ

Saturday, June 29th, 2019
deeksha

ಮಂಗಳೂರು :  ಪ್ರೇಮಿಯಿಂದ ಇರಿತಕ್ಕೊಳಗಾಗಿದ್ದ ಯುವತಿ ದೇರಳಕಟ್ಟೆ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ವೆಂಟಿಲೇಟರ್ ಅಳವಡಿಸಲಾಗಿದ್ದು ಎದೆ,  ಹೊಟ್ಟೆ ಬಾಗಕ್ಕೆ ಇರಿದ ಪರಿಣಾಮ ತೀವ್ರ ರಕ್ತ ಸ್ರಾವ ಉಂಟಾಗಿದೆ.  ಸ್ಥಿತಿ ಗಂಭೀರವಾಗಿದ್ದರೂ ಆಕೆ ಶನಿವಾರ ಚಿಕಿತ್ಸೆಗೆ ಸ್ಪಂದಿಸುತ್ತಿದಾಳೆ ಎಂದು  ಆಸ್ಪತ್ರೆಯಲ್ಲಿದ್ದ ಕುಟುಂಬದ ಮೂಲಗಳು ತಿಳಿಸಿವೆ. ಈ ಮಧ್ಯೆ ಬಿಜೆಪಿ ಮುಖಂಡರಾದ ಮಂಗಳೂರು ಕ್ಷೇತ್ರಾದ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹಾಗೂ ಚಂದ್ರಹಾಸ್ ಪಂಡಿತಹೌಸ್ ಭೇಟಿಯಾಗಿ ಧೈರ್ಯತುಂಬಿದರು. ಯುವತಿಯ ತಂದೆ ತಾಯಿ ಆಸ್ಪತ್ರೆಯಲ್ಲೇ ಇದ್ದು ಮಗಳ ಸುದ್ದಿ ಕೇಳಿ ತಾಯಿ ಕುಸಿದಿದ್ದರು. ಯುವತಿಯ ಚಿಕಿತ್ಸೆಗೆ ಏಳು ವೈದ್ಯರು ಶ್ರಮವಹಿಸಿದ್ದಾರೆ 15 […]

ಭಗ್ನಪ್ರೇಮಿ ಯಿಂದ ಇರಿತಕ್ಕೊಳಗಾದ ಯುವತಿ ಸ್ಥಿತಿ ಗಂಭೀರ

Saturday, June 29th, 2019
Sushanth-deekha

ಮಂಗಳೂರು : ಭಗ್ನಪ್ರೇಮಿ ಯಿಂದ ಇರಿತಕ್ಕೊಳಗಾದ ದೀಕ್ಷಾ ಕೋಟ್ಯಾನ್  (20)  ಸ್ಥಿತಿ ಗಂಭೀರವಾಗಿದ್ದು ಈಗಾಗಲೇ 15 ಬಾಟಲಿ ಗಳಷ್ಟು  ರಕ್ತ ನೀಡಲಾಗಿದ್ದು ಆಕೆ ಜೀವನ್ಮರಣ ಸ್ಥಿತಿಯಲ್ಲಿ ದೇರಳಕಟ್ಟೆಯ ಕೆ. ಎಸ್ ಹಗ್ಡೆ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿಡಲಾಗಿದೆ. ಸುಶಾಂತ್ ಮತ್ತು ದೀಕ್ಷಾ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಸುಶಾಂತ್ ಒಳ್ಳೆಯ ನ್ರತ್ಯಪಟುವಾಗಿದ್ದ, ಜೊತೆಗೆ ನೃತ್ಯ ತರಬೇತುದಾರನಾಗಿದ್ದ. ದೇವದಾಸ್ ಕಾಪಿಕಾಡ್ ಅವರ ಚಿತ್ರದಲ್ಲಿಅರ್ಜುನ್ ಜೊತೆ ತಾಸೆದ ಪೆಟ್ಟುಗ್ ಊರುದ ಪಿಲಿಕುಲು ನಲಿಪುನ ಪೊರ್ಲು ತೂಯನ ಎಂಬ ಹಾಡಿಗೂ ಹೆಜ್ಜೆ ಹಾಕಿದ್ದ. ಕೆಲವು ತಿಂಗಳುಗಳ ಹಿಂದೆ […]

ಪ್ರೇಯಸಿಗೆ ಚೂರಿಯಿಂದ ಇರಿದು, ತಾನು ಕುತ್ತಿಗೆಗೆ ಇರಿದು ಕೊಂಡ ಯುವಕ

Friday, June 28th, 2019
Sushanth

ಮಂಗಳೂರು : ಯುವಕನೊಬ್ಬ ಯುವತಿಗೆ ಚೂರಿಯಿಂದ ಇರಿದು,   ತಾನು ಕುತ್ತಿಗೆಗೆ ಇರಿದು ಕೊಂಡು ಸಾವು ಬದುಕಿನ ನಡುವೆ ಆಸ್ಪತ್ರೆಗೆ ದಾಖಲಾದ ಘಟನೆ ದೇರಳಕಟ್ಟೆ ಸಮೀಪದ ಬಗಂಬಿಲದಲ್ಲಿ ಶುಕ್ರವಾರ ನಡೆದಿದೆ. ಈ ಘಟನೆಯನ್ನು ನೆರೆ ಮನೆಯವರು  ಚಿತ್ರೀಕರಿಸಿದ್ದು. ಯುವಕ ಯುವತಿಯನ್ನು ಇರಿದು ತಾನು ಇರಿದು ಕೊಳ್ಳುವುದು ದಾಖಲಾಗಿದೆ. ಶಕ್ತಿನಗರದ ನಿವಾಸಿ ಸುಶಾಂತ್(22) ಚೂರಿಯಿಂದ ಇರಿದ ಆರೋಪಿಯಾಗಿದ್ದಾನೆ. ಇರಿತಕ್ಕೊಳಗಾದವಳನ್ನು ಬಗಂಬಿಲದ ದೀಕ್ಷಾ(20)ಎಂದು ತಿಳಿದು ಬಂದಿದೆ ಇಬ್ಬರ ನಡುವಿನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಸುಶಾಂತ್ ಯುವತಿಯ ಮನೆಯಬಳಿಗೆ ಬಂದು  ಚೂರಿಯಿಂದ ಇರಿದಿದ್ದಾನೆ. ಬಳಿಕ ಆರೋಪಿ ತನ್ನ […]