ಮಂಗಳೂರು : ಟ್ಯಾಂಕರ್-ಬೈಕ್ ನಡುವೆ ಅಪಘಾತ; ಸವಾರ ಸ್ಥಳದಲ್ಲೇ ಮೃತ್ಯು

3:53 PM, Tuesday, October 8th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

accidentಮಂಗಳೂರು : ಟ್ಯಾಂಕರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆಯು ಅಡ್ಯಾರ್ ಕಟ್ಟೆ ಸಮೀಪ ಅ. 08ರ ಮಂಗಳವಾರ ನಡೆದಿದೆ.

ಮೃತ ಸವಾರನನ್ನು ಅಡ್ಯಾರ್ ನಿವಾಸಿ ಹಾತಿಮ್ (25) ಎಂದು ತಿಳಿದುಬಂದಿದೆ.ಅಡ್ಯಾರ್ ಕಣ್ಣೂರಿನಲ್ಲಿ ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಬೇಕಿದ್ದ ತರಕಾರಿ ಅಂಗಡಿಗೆ ಪೈಂಟ್ ತರಲೆಂದು ಫರಂಗಿಪೇಟೆ ಕಡೆ ಸವಾರ ಹಾತಿಮ್ ಹೊರಟಿದ್ದ. ಈ ವೇಳೆ ಬೈಕ್ ಗೆ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English