ಸೂರ್ಯಗ್ರಹಣ : ಶ್ರೀ ಕ್ಷೇತ್ರ ಕದ್ರಿಯಲ್ಲಿ ಲೋಕಕಲ್ಯಾಣಾರ್ಥ ಮಂತ್ರ ಪಠನ; ಭಜನೆ

11:33 AM, Friday, December 27th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

Kadri

ಮಂಗಳೂರು : ಡಿಸೆಂಬರ್ 26 ರಂದು ಕದ್ರಿ ಶ್ರೀ ಮಂಜುನಾಥ ದೇವಳದಲ್ಲಿ ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವದೊಂದಿಗೆ ಕಂಕಣ ಸೂರ್ಯಗ್ರಹಣದ ಪ್ರಯುಕ್ತ, ಲೋಕಕಲ್ಯಾಣಾರ್ಥ ಸುಭಿಕ್ಷೆಗಾಗಿ ಸಾಮೂಹಿಕ ರುದ್ರಪಾರಾಯಣ, ವಿಷ್ಣು ಸಹಸ್ರನಾಮ ಪಠನ, ಹಾಗು ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ನೇತೃತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ವೇ.ಮೂ.ಡಾ.ಪ್ರಭಾಕರ ಅಡಿಗರ ಮಾರ್ಗದರ್ಶನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರಾಘವೇಂದ್ರ ಅಡಿಗ, ವಿದ್ವಾನ್ ರವಿ ಅಡಿಗ, ಕೃಷ್ಣ ಅಡಿಗ, ಗಣೇಶ ಹೆಬ್ಬಾರ್ ಕದ್ರಿ, ಡಾ.ಪ್ರಕಾಶ್‌ಕೃಷ್ಣ, ಸುಧಾಕರ ರಾವ್ ಪೇಜಾವರ, ಪ್ರಭಾಕರ ರಾವ್ ಪೇಜಾವರ, ರಘುರಾಮ ರಾವ್ ಲ್ಯಾಂಡ್‌ಲಿಂಕ್ಸ್, ಎಲ್ಲೂರು ರಾಮಚಂದ್ರ ಭಟ್, ಮೊದಲಾದವರು ಪಾಲ್ಗೊಂಡ್ದಿದರು. ವಿಪ್ರ ಸಮೂಹ ಕೊಂಚಾಡಿ, ವಿಷ್ಣು ಸಹಸ್ರನಾಮ ಕೂಟ ನೋಡು, ಶಿವಪ್ರಿಯ ಭಜನಾ ಬಳಗ, ಗೋಪಾಲಕೃಷ್ಣ ಭಜನಾ ಮಂಡಳಿ ಕದ್ರಿ ಕಂಬಳ ತಂಡಗಳು ಭಜನೆ, ಕೃಷ್ಣ ಸ್ತೋತ್ರ, ದೇವೀ ಸ್ತೋತ್ರ, ಗಣಪತಿ ಸ್ತೋತ್ರ ಪಾರಾಯಣದಲ್ಲಿ ಪಾಲ್ಗೊಂಡರು.

ಶ್ರೀ ಕ್ಷೇತ್ರದ ವ್ಯವಸ್ಥಪನಾ ಸಮಿತಿಯ ಅಧ್ಯಕ್ಷ ಎ.ಜೆ.ಶೆಟ್ಟಿ ಮತ್ತು ಕ್ಷೇತ್ರದ ತಂತ್ರಿಗಳಾದ ವಿಠಲದಾಸ ತಂತ್ರಿಯವರ ಸಹಕಾರದೊಂದಿಗೆ ಜರಗಿದ ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English