ಮಡಿಕೇರಿಯಲ್ಲಿ ಕಾರು ಚಾಲಕ ಆತ್ಮಹತ್ಯೆಗೆ ಶರಣು

10:18 AM, Monday, January 6th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Dakshath

ಮಡಿಕೇರಿ : ನಗರದಲ್ಲಿ ಟ್ಯಾಕ್ಸಿ ಚಾಲಕ ವೃತ್ತಿ ನಿರ್ವಹಿಸುತ್ತಿದ್ದ ಯುವಕನೊಬ್ಬ ಲಾಡ್ಜ್‌ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತೈ ಮಾಡಿಕೊಂಡ ಘಟನೆ ನಡೆದಿದೆ.

ಹಾಕತ್ತೂರು ನಿವಾಸಿ ದಕ್ಷತ್(28) ಎಂಬಾತನೇ ನೇಣಿಗೆ ಶರಣಾದ ಕಾರು ಚಾಲಕ. ಶುಕ್ರವಾರ ಸಂಜೆ ದಕ್ಷತ್ ಲಾಡ್ಜ್‌ನ ರೂಂ ಬುಕ್ ಮಾಡಿದ್ದ. ಬಳಿಕ ವಾಟ್ಸಪ್ ಟ್ಟೇಟಸ್‌ನಲ್ಲಿ ತಂದೆ ತಾಯಿಯ ಫೋಟೊ ಹಾಕಿ ಮಿಸ್ ಯು ಡ್ಯಾಡಿ ಅಮ್ಮ ಎಂದು ಬರೆದುಕೊಂಡಿದ್ದ.

ರಾತ್ರಿ 9 ಗಂಟೆಯ ವೇಳೆಗೆ ದಕ್ಷತ್‌ನ ಗೆಳೆಯನೊಬ್ಬ ಲಾಡ್ಜ್‌ಗೆ ಬಂದು ರೂಂನ ಬಾಗಿಲು ಬಡಿದರೂ, ದಕ್ಷತ್ ಬಾಗಿಲು ತೆಗೆಯಲಿಲ್ಲ. ದಕ್ಷತ್ ಮಲಗಿರಬಹುದೆಂದು ಆತನ ಗೆಳೆಯ ಅಲ್ಲಿಂದ ತೆರಳಿದ್ದ. ಇಂದು ಮಧ್ಯಾಹ್ನ ವೇಳೆಗೆ ಲಾಡ್ಜ್‌ನ ಮಾಲೀಕರು ಬಂದು ಬಾಗಿಲು ಬಡಿದರೂ ದಕ್ಷತ್ ಬಾಗಿಲು ತೆಗೆಯಲಿಲ್ಲ. ಇದರಿಂದ ಸಂಶಯಗೊಂಡ ಲಾಡ್ಜ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸರು ಬಂದು ಬಾಗಿಲು ತೆರೆದು ನೋಡಿದಾಗ ದಕ್ಷತ್ ನೇಣು ಬಿಗಿದುಕೊಂಡು ಆತ್ಮಹತೈ ಮಾಡಿಕೊಂಡಿರುವುದು ಕಂಡು ಬಂದಿದೆ. ಬಳಿಕ ಸ್ಥಳ ಮಹಜರು ನಡೆಸಿ, ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು. ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಆತ್ಮಹತೈಗೆ ನಿಖರ ಕಾರಣ ತಿಳಿದು ಬಂದಿಲ್ಲ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English