7,8,9 ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ 39ನೇ ರಾಜ್ಯ ಸಮ್ಮೇಳನ

10:22 AM, Monday, February 3rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

ABVP

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ.ಇದರ 39ನೇ ರಾಜ್ಯ ಸಮ್ಮೇಳನವು ದಿನಾಂಕ 7,8,9 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಂಗಣ(ಪುರಭವನ)ದಲ್ಲಿ ನಡೆಯಲಿದೆ.

ಸಮ್ಮೇಳನದ ಅಂಗವಾಗಿ ದಿನಾಂಕ 02-02-2020ರಂದು ಮಂಗಳೂರು ವಿಭಾಗದ ಪ್ರಬಂಧಕರ ಮಹಾ ಬೈಠಕ್ ಅಭಾವಿಪ ಕಾರ್ಯಲಯದಲ್ಲಿ ನಡೆಯಿತು.

ವಿಭಾಗ ಪ್ರಮುಖರಾದ ಕೇಶವ ಬಂಗೇರ ಮಾತನಾಡಿ ಸಮ್ಮೇಳನದಲ್ಲಿ ಪ್ರಬಂಧಕರ ಪಾತ್ರವೇನೆಂದು ತಿಳಿಸಿ ನಂತರ ಕಾರ್ಯಕರ್ತರಿಗಿರುವ ವಿವಿಧ ಜವಾಬ್ದಾರಿಗಳ ಬಗೆಗೆ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಅಭಾವಿಪ ದ ಮಧ್ಯಕ್ಷೇತ್ರಿಯ ಸಹಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ, ಕರ್ನಾಟಕ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಮೀಸೆ, ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ಸಮ್ಮೇಳನದ ವ್ಯವಸ್ಥ ಪ್ರಮುಖ್ ಸಂದೇಶ್ ರೈ ಉಪಸ್ಥಿತರಿದ್ದರು. ನಗರ ಕಾರ್ಯದರ್ಶಿ ಮಣಿಕಂಠ ಸ್ವಾಗತಿಸಿ,ವಂದಿಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English