ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ.ಇದರ 39ನೇ ರಾಜ್ಯ ಸಮ್ಮೇಳನವು ದಿನಾಂಕ 7,8,9 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಂಗಣ(ಪುರಭವನ)ದಲ್ಲಿ ನಡೆಯಲಿದೆ.
ಸಮ್ಮೇಳನದ ಅಂಗವಾಗಿ ದಿನಾಂಕ 02-02-2020ರಂದು ಮಂಗಳೂರು ವಿಭಾಗದ ಪ್ರಬಂಧಕರ ಮಹಾ ಬೈಠಕ್ ಅಭಾವಿಪ ಕಾರ್ಯಲಯದಲ್ಲಿ ನಡೆಯಿತು.
ವಿಭಾಗ ಪ್ರಮುಖರಾದ ಕೇಶವ ಬಂಗೇರ ಮಾತನಾಡಿ ಸಮ್ಮೇಳನದಲ್ಲಿ ಪ್ರಬಂಧಕರ ಪಾತ್ರವೇನೆಂದು ತಿಳಿಸಿ ನಂತರ ಕಾರ್ಯಕರ್ತರಿಗಿರುವ ವಿವಿಧ ಜವಾಬ್ದಾರಿಗಳ ಬಗೆಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಅಭಾವಿಪ ದ ಮಧ್ಯಕ್ಷೇತ್ರಿಯ ಸಹಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ, ಕರ್ನಾಟಕ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಮೀಸೆ, ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ಸಮ್ಮೇಳನದ ವ್ಯವಸ್ಥ ಪ್ರಮುಖ್ ಸಂದೇಶ್ ರೈ ಉಪಸ್ಥಿತರಿದ್ದರು. ನಗರ ಕಾರ್ಯದರ್ಶಿ ಮಣಿಕಂಠ ಸ್ವಾಗತಿಸಿ,ವಂದಿಸಿದರು.
Click this button or press Ctrl+G to toggle between Kannada and English