ಬಜೆಟ್​ ಅಧಿವೇಶನದಂದು ಸಂವಿಧಾನ ಕುರಿತು ಎಲ್ಲಾ ಸದಸ್ಯರಿಂದ ಭಾಷಣ : ಸಿಎಂ ಬಿಎಸ್​ ಯಡಿಯೂರಪ್ಪ

2:15 PM, Wednesday, February 26th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

bsy

ಕೊಪ್ಪಳ : ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಎಲ್ಲಾ ಶಾಸಕರು ಸಂವಿಧಾನದ ಕುರಿತು ಮಾತನಾಡಲಿದ್ದು, ಇದೊಂದು ಐತಿಹಾಸಿಕ ಅಧಿವೇಶನ ಆಗಿರಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಇಲ್ಲಿನ ಕುಕನೂರಿನಲ್ಲಿ ಮಾತನಾಡಿದ ಅವರು, ಸಂವಿಧಾನ ಕುರಿತು ಶಾಸಕರು ಮಾತನಾಡಲು ನೆರವಾಗಲು ಕನ್ನಡ ಅನುವಾದ ಪ್ರತಿ ಮುದ್ರಿಸಿ ಹಂಚಲಾಗುವುದು. ಇದರಿಂದ ಸಂವಿಧಾನವನ್ನು ಓದಿಕೊಂಡು ಬರಲು ಸಹಾಯಕವಾಗಲಿದೆ. ಬಜೆಟ್ ಮುನ್ನ ಅಂದರೆ ಮಾರ್ಚ್ 3 ಮತ್ತು 4ರಂದು ಎಲ್ಲ ಶಾಸಕರು ಸಂವಿಧಾನದ ಕುರಿತು ಭಾಷಣ ಮಾಡಲಿದ್ದಾರೆ ಎಂದರು.

ಇದೇ ಮೊದಲ ಬಾರಿಗೆ ಸಂವಿಧಾನ ಕುರಿತು ಮಾತನಾಡಲು ಏರ್ಪಾಡು ಮಾಡಲಾಗಿದೆ. ಎಲ್ಲಾ ಸದಸ್ಯರು ಈ ಕುರಿತು ಮಾತನಾಡಲಿದ್ದಾರೆ ಎಂದು ತಿಳಿಸಿದ ಅವರು, ಬಜೆಟ್ ಸಿದ್ಧತೆ ಕಾರ್ಯ ನಡೆಯುತ್ತಿದ್ದು, ಜನಪರ ಬಜೆಟ್ ಮಂಡಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಆಡಳಿತ ನಡೆಸಲು ಬರುವುದಿಲ್ಲ ಎಂಬ ಪ್ರತಿಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ಹಾಗೆಂದು ಹೇಳೋರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English