ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದು ನಿಂತ ಪಿಕಪ್ ವಾಹನ : ಚಾಲಕನಿಗೆ ಗಾಯ

1:35 PM, Tuesday, March 3rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

pickup

ಉಳ್ಳಾಲ : ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನವೊಂದು ಸೇತುವೆಗೆ ಢಿಕ್ಕಿ ಹೊಡೆದ ಘಟನೆ ಮಂಗಳವಾರ ಬೆಳಿಗ್ಗೆ ತಲಪಾಡಿ ಬಳಿಯ ಕೆ.ಸಿ.ರೋಡು- ಉಚ್ಚಿಲ ಸೇತುವೆಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿ ಬಳಿಯ ಕೆ.ಸಿ.ರೋಡ್ – ಉಚ್ಚಿಲ ನಡುವೆ ಈ ಘಟನೆ ನಡೆದಿದ್ದು, ಢಿಕ್ಕಿ ಹೊಡೆದ ವಾಹನ ಸೇತುವೆಯಿಂದ ಮೇಲೆ ನಿಂತ ಕಾರಣದಿಂದ ಬಹುದೊಡ್ಡ ದುರಂತ ಅದೃಷ್ಟಶವಾತ್ ತಪ್ಪಿದೆ. ಸೇತುವೆ ಕೆಳಗೆ ಹಲವು ಅಡಿಗಳಷ್ಟು ಆಳವಿರುವ ಕಾರಣ ಒಂದು ವೇಳೆ ವಾಹನ ಕೆಳಗೆ ಬಿದ್ದಿದ್ದರೆ ದುರಂತ ನಡೆಯುವ ಸಂಭವ ಅಧಿಕವಾಗಿತ್ತು.

ಘಟನೆಯಲ್ಲಿ ವಾಹನ ಚಾಲಕ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಂಗಳೂರು ನಾಗುರಿ ಸಂಚಾರಿ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English